ಶನಿವಾರ, ಮಾರ್ಚ್ 13, 2021

ಉಪ್ಪಿನ ಕಾಯಿಗೆ ಒಂಚೂರು ಅನ್ನ...ಸುರಹೊನ್ನೆ

 ಉಪ್ಪಿನ ಕಾಯಿಗೆ ಒಂಚೂರು ಅನ್ನ..

 
"ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ"ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆ ಯೇ ದೇವರ ಮನೆಯಲ್ಲಿ ಗಂಟೆ ಭಾರಿಸುತ್ತಲೆ ಕೇಳಿದರು.
"ಸೋಮವಾರದಂದು ಬಂದಿದೆ,ಯಾಕೆ ಅವತ್ತು ಏನಿದೆ"ಎಂದು ಸ್ವಲ್ಪ ಕುತೂಹಲದಿಂದಲೇ ಕೇಳಿದೆ.
"ಹೌದಾ,ಏನಿಲ್ಲ ಕಣೆ,ಕೃಷ್ಣನ ಮನೇ ಗೃಹ ಪ್ರವೇಶ ಇದೆ,ಸೋಮವಾರ ಅಂದ್ರೆ ಇನ್ನು ನಾಲ್ಕೇ ದಿನ ಅಲ್ವಾ,ಯಾರಾದ್ರೂ ಒಳ್ಳೆ ಕೇಟರಿಂಗ್ ನವರು ಗೊತ್ತಿದ್ರೆ ಹೇಳು ಅಂದಿದ್ದ,ನಮ್ಮ ಮನೆ ಗೃಹ ಪ್ರವೇಶದಲ್ಲಿ ಅಡುಗೆ ಮಾಡಿದ್ದ ವರಿಗೆ ಹೇಳೋಣ ಅಂದು ಕೊಂಡಿದ್ದೇನೆ"ಎನ್ನುವ ಉತ್ತರ ಬಂತು.
"ನಮ್ಮನೆ ಅಡುಗೆ ಮಾಡಿದವರ! ಬೇಡ,ಅವರು ಬರೀ ಒಂದಕ್ಕೆ ನಾಲ್ಕು ಅಳತೆ ಬರೆದು ಎಷ್ಟೊಂದು ರೇಷನ್ ಉಳಿದು ಹೋಯಿತು.ಬೇರೆ ಯಾರಿಗಾದ್ರೂ ಹೇಳಿ"ಎಂದೆ.
 
‌ಅಷ್ಟರಲ್ಲಿ ಪೂಜೆ ಮುಗಿಸಿ ಬಂದವರು"ಅಯ್ಯೋ ಕೃಷ್ಣ ಏನು ಅಂಗಡಿ ರೇಷನ್ ತಂದುಕೊಟ್ಟು ಅಡಿಗೆ ಮಾಡಿ ಸಲ್ಲ ವಂತೆ. ಪ್ಲೇಟ್ ಗೆ ಇಷ್ಟು ಅಂತ ಹೇಳಿ ಒಟ್ಟಿಗೆ ದುಡ್ಡು ಕೊಟ್ಟು ಬಿಡ್ತಾನಂತೆ. ಇನ್ನು ಖರೀದಿ,ತಯಾರಿ, ಅಡುಗೆ ಮಾಡುವುದು,ಬಡಿಸುವುದು ಎಲ್ಲಾ ಅವರ ಜವಾಬ್ದಾರಿ,ಎಷ್ಟು ಸಲೀಸು ನೋಡು. ಇನ್ನು ಮುಂದೆ ಏನಾದರೂ ನಾವು ಕಾರ್ಯ ಮಾಡುವುದಾದರೆ ನಾವೂ ಹಾಗೆ ಮಾಡಿದರಾಯಿತು,ಸುಮ್ನೆ ನಮ್ಮನೆ ಗೃಹ ಪ್ರವೇಶದಲ್ಲಿ ಎಷ್ಟೊಂದು ವೇಸ್ಟ್ ಆಯಿತು.ನಾವು ಶುರುವಿನಲ್ಲಿ ಸರಿಯಾಗಿ ಪ್ಲಾನ್ ಮಾಡಲಿಲ್ಲ" ಎಂದಿವರು ಕೊರಗಿದರು.
 
ಇವರು ಹೇಳೋದು ಸರಿಯೇ.
  ಮನೆಗಳಲ್ಲಿ ಕಾರ್ಯಗಳಾಗಬೇಕಾದರೆ ಮೊದಲಿಗೆ. ಚರ್ಚೆಗೆ ಬರುವ ವಿಷಯವೇ ಭೋಜನದ ಮೆನು.ಕಾರ್ಯದ ಗಾತ್ರ, ಮಹತ್ವ,ಸೇರುವ ಜನರ ಸಂಖ್ಯೆ,ಶುಭ ,ಅಶುಭ, ಸಸ್ಯಾಹಾರಿ ಸ್ವರೂಪದ್ದ ಇಲ್ಲವೇ ಮಾಂಸಾಹಾರದ ಅನುಮತಿ ಇರುವ ಕಾರ್ಯವೇ ನೋಡಿಕೊಂಡು ತಯಾರಿ ನಡೆಸಿ,ಅದನ್ನು ಕಾರ್ಯ ರೂಪಕ್ಕೆ ತಂದು ಮುಗಿಸುವಷ್ಟರಲ್ಲಿ ಜೀವ ಹೈರಾಣ ವಾಗಿ ಹೋಗಿರುತ್ತದೆ.
 
ಮೊದಲನೆಯದಾಗಿ ಒಳ್ಳೆಯ ಅಡುಗೆಯವರನ್ನು ಹುಡುಕಬೇಕು.ಒಳ್ಳೆಯ ಅಂದರೆ ಬರೀ ರುಚಿಯಾಗಿ ಅಡುಗೆ ಮಾಡುವವರು ಮಾತ್ರವಲ್ಲ,ರುಚಿಯ ಜೊತೆಗೆ ಶುಚಿಯನ್ನೂ ಕಾಪಾಡಿಕೊಂಡು,ತಂದು ಕೊಡುವ ಸಾಮಗ್ರಿಗಳನ್ನು ಪೋಲು ಮಾಡದೆ,ಅಚ್ಚುಕಟ್ಟು ತನದಿಂದ ಬಡಿಸಿ,ಎಲ್ಲರಿಂದ ಸೈ ಅನಿಸಿಕೊಂಡು
 ಹೋಗುವವರು.ಎಲ್ಲಿ ಹುಡುಕೋದು ಅಂತಹವರನ್ನು?
 
ಆಗ ಕುಳಿತುಕೊಂಡು ಕಳೆದ ಸ್ವಲ್ಪ ವರ್ಷಗಳಲ್ಲಿ ನಾವು ಹೋಗಿ ಬಂದಿರುವ ಎಲ್ಲಾ ಕಾರ್ಯಗಳ ನೆನಪು ಮಾಡಿಕೊಂಡು,ಯಾವ ಕಾರ್ಯದಲ್ಲಿ ಊಟ ಚೆನ್ನಾಗಿತ್ತು ಅಂತ ತಲೆ ಕೆರೆದುಕೊಂಡು,ಗಂಡ ಹೆಂಡತಿ ಕೂತು ಚರ್ಚೆ ಮಾಡಿ,ಕೊನೆಗೆ ಒಂದು ತೀರ್ಮಾನಕ್ಕೆ ಬರುವಷ್ಟರಲ್ಲಿ ಸುಸ್ತೋ ಸುಸ್ತು.
 
ಸರಿ, ಈಗ ,ಇಂತಹವರ ಮನೇ ಇಂಥ ಕಾರ್ಯದಲ್ಲಿ ಅಡುಗೆ ಚೆನ್ನಾಗಿತ್ತು ಅನ್ನೋದು ಕಂಡುಕೊಂಡ ಮೇಲೆ,ಅವರಿಗೆ ಕರೆ ಮಾಡಿ ಅವರ ಅಡುಗೆಯವರ ಫೋನ್ ನಂಬರ್ ತೊಗೊಂಡು ಅವರನ್ನು ಮನೆಗೆ ಕರೆಯಿಸಿಕೊಂಡು ಮೆನು ಚರ್ಚೆ ನಡೆಸೋದು ಮುಂದಿನ ಸುತ್ತು.
 
ಸರಿ ಅಡುಗೆಯವರು ಮನೆಗೆ ಬಂದ ಮೇಲೆ ಅವರ ಸ್ಪೆಷಾಲಿಟಿ ಅಡುಗೆಗಳ ಒಂದು ಪಟ್ಟಿಯನ್ನೇ ನಮ್ಮ ಕೈಗೆ ಹಿಡಿಸುತ್ತಾರೆ. ಅದರಲ್ಲಿ ನಮ್ಮ ನಮ್ಮ ರುಚಿ ಅಭಿರುಚಿಗೆ ತಕ್ಕ ಹಾಗೆ ಖಾದ್ಯಗಳ ಆರಿಸುವುದು ಮುಂದಿನ ಹಂತ.ಇದರಲ್ಲಿ ಮಕ್ಕಳನ್ನು ಒಳಗೊಳ್ಳದೆ ಹೋದರೆ ಆದೀತೆ?.ಮಕ್ಕಳು ಬಿಡಿ,ಅವರನ್ನೇ ಬಿಟ್ಟರೆ,ಅವರು ಆರಿಸುವ ಮೆನು ಖರ್ಚಿಗೆ,ಗೃಹ ಪ್ರವೇಶದ ಮನೆಯನ್ನೇ ಮಾರಿ ದುಡ್ಡು ಹೊಂದಿಸಬೇಕಷ್ಟೇ.ಅಂತೂ ಇಂತೂ ಅಳೆದು ಸುರಿದು ಅಡುಗೆಯವರಿಗೆ ತಯಾರಿಸಬೇಕಾದ ಖಾದ್ಯಗಳ ಪಟ್ಟಿ ಕೊಟ್ಟ ಮೇಲೆ, ಅವರು ಅವುಗಳ ತಯಾರಿಯ ಅಂದಾಜು ವೆಚ್ಚ ಲೆಕ್ಕಾಚಾರ ಮಾಡಿ,ಒಂದು ಪ್ಲೇಟ್ ಗೆ ತಗುಲಬಹುದಾದ ವೆಚ್ಚ ತಿಳಿಸುತ್ತಾರೆ.ವೆಚ್ಚ ತಿಳಿದ ಮೇಲೆ ಇನ್ನೂ ಒಂದೆರಡು ಖಾದ್ಯಗಳು ಎಲೆಯ ಮೇಲೆ ಬೀಳಬಹುದು ಇಲ್ಲವೇ ಮಾಯವಾಗಲೂಬಹುದು.ಅದು ಮನೆಯವರ ಬಜೆಟ್ ಆಧರಿಸಿ ನಿರ್ಧಾರ ವಾಗುತ್ತೆ.
 
ಈಗ ಕಾರ್ಯದ ಭೋಜನದ ಮೆನು ಒಂದು ಸ್ಥೂಲ ರೂಪಕ್ಕೆ ಬಂದಾಯಿತು. ಇನ್ನು ಕಾರ್ಯಕ್ಕಿಳಿಯುವುದೆ ಬಾಕಿ.ಇದರಲ್ಲೂ ಎರಡು ವಿಧ.ಒಂದೋ ನಾವೇ ಅಡುಗೆಗೆ ಬೇಕಾಗುವ ಎಲ್ಲಾ ಸಾಮಗ್ರಿ ತಂದು ಕೊಟ್ಟು,ಮನೆಯ ಒಂದು ಭಾಗದಲ್ಲಿ ಒಲೆ ಹೂಡಲು ಅನುವು ಮಾಡಿಕೊಟ್ಟು ಕಾರ್ಯದ ದಿನ ಅಡುಗೆ ಮಾಡಿಸಿ ,ಬಂದವರ ಸತ್ಕರಿಸಿ ಕಳಿಸುವುದು.ಇಲ್ಲವೇ ಅಡುಗೆಯವರಿಗೆ ಎಲ್ಲಾ ಜವಾಬ್ದಾರಿ ವಹಿಸಿ, ಒಂದು ಪ್ಲೇಟ್ ಗೆ ಇಷ್ಟು,ಈ ಲೆಕ್ಕದಲ್ಲಿ ಕಾರ್ಯಕ್ಕೆ ಬರಬಹುದಾದ ಜನರ ಸಂಖ್ಯೆ ಅಂದಾಜು ಮಾಡಿ,ಅಷ್ಟು ಪ್ಲೇಟ್ ಊಟದ ಖರ್ಚು ಒಟ್ಟಿಗೇ ಕೊಟ್ಟು ಬಿಡುವುದು.
 
ಒಟ್ಟಿಗೇ ಖರ್ಚು ಕೊಟ್ಟು ಬಿಟ್ಟರೆ ನಮಗೆ ಕೆಲಸ ಸುಲಭ.ಇಲ್ಲದಿದ್ದರೆ ಅಂಗಡಿಯಿಂದ ಅಂಗಡಿಗೆ ಅಳೆದು,ರೇಷನ್ ತಂದು ಅದರ ಮೇಲುಸ್ತುವಾರಿ ಯಾರಾದರೂ ಮನೆಯ ಸದಸ್ಯರಿಗೆ ವಹಿಸಿ,ಅವರು ಕಳ್ಳತನವಾಗದಂತೆ,ಪೋಲಾಗದಂತೆ ಉಸ್ತುವಾರಿ ನಡೆಸಿ,ಕಾರ್ಯದ ದಿನ ಚೆನ್ನಾಗಿ ಎಲ್ಲರಿಗೂ ಬಡಿಸಿ ಹೋಗುವುದು ದೊಡ್ಡ ತಲೆನೋವಾಗಿ ಹೋಗುತ್ತದೆ.
ಒಟ್ಟಿಗೇ ವಹಿಸಿದರೆ ಎಲ್ಲಾ ಅಡುಗೆಯವರ ಜವಾಬ್ದಾರಿ.ಏನೂ ಪೋಲಾಗದಂತೆ ನಿಗಾ ವಹಿಸುತ್ತಾರೆ.ಉಳಿದರೆ ವಾಪಸ್ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುವ ಜವಾಬ್ದಾರಿಯೂ ಅವರದೇ.ಹಾಗಾಗಿ ಇತ್ತೀಚೆಗೆ ಎಲ್ಲರೂ ಕೇಟರಿಂಗ್ ನವರ ಮೊರೆ ಹೋಗುತ್ತಿದ್ದಾರೆ. ಆದರೆ ಅಡುಗೆ ರುಚಿ?ಅದಂತೂ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ನನಗೆ ಅನುಭವಕ್ಕೆ ಬಂದಿದೆ.
 
ಕೇಟರಿಂಗ್ ನವರು ಕೂಡ ಮಾಡೋದು ಬ್ಯುಸಿನೆಸ್ ತಾನೇ.ಹಾಗಾಗಿ ಎಲ್ಲಾ ವ್ಯಾಪಾರದವರ ಹಾಗೆ ಲಾಭ ಮಾಡಲೇ ಪ್ರಯತ್ನಿಸುವುದು ತಪ್ಪೇನಿಲ್ಲ ಬಿಡಿ.ಕೆಲವರು ನಮ್ಮ ನೀರೀಕ್ಷೆಗೆ ತಕ್ಕ ಹಾಗೆಯೇ ಅಡುಗೆ ಶುಚಿ ರುಚಿಯಾಗಿ ಮಾಡಿ,ಪೂರೈಸಿದರೆ,ಮತ್ತೆ ಕೆಲವರು ಅತಿ ಲಾಭದ ಆಸೆಯಿಂದ ಖಾದ್ಯಗಳ ರುಚಿಯಲ್ಲಿ ಇಲ್ಲವೇ ಬಡಿಸುವ ಪ್ರಮಾಣದಲ್ಲಿ ಹೊಂದಾಣಿಕೆ ಮಾಡಿಕೊಂಡು ಬಿಡುತ್ತಾರೆ. ಈ ಎರಡೂ ವಿಧದ ಕೇಟರಿಂಗ್ ನ ಸವಿ ಸವಿದಿದ್ದೇನೆ.
 
 
ಒಮ್ಮೆ ನಮ್ಮ ಭಾರಿ ಶ್ರೀಮಂತ ನೆಂಟರೊಬ್ಬರ ಮನೆಯ ಕಾರ್ಯವೊಂದರಲ್ಲಿ ಅಡುಗೆ ಎಷ್ಟು ತೆಳುಗೊಳಿಸಲು ಸಾಧ್ಯವೋ ಅಷ್ಟು ತೆಳುಗೊಳಿಸಿದ್ದರು.ಮೊಸರು ಗೊಜ್ಜು ಮಜ್ಜಿಗೆ ಗೊಜ್ಜಾಗಿ,ಪಲಾವ್ ನಲ್ಲಿ ಯಾವ ಮಸಾಲೆಯ ಘಮವೂ ಇಲ್ಲದೆ,ಸಿಹಿ ತಿಂಡಿಗಳು ತಮ್ಮ ಗಾತ್ರವನ್ನು ಒಂದೆರಡು ಸುತ್ತು ಕಡಿಮೆ ಮಾಡಿಕೊಂಡು,ಇಲ್ಲಿ ಬಿಟ್ಟರೆ ಅಲ್ಲಿ ಹರಿಯುವ ಸಾರು ಕೇಟರಿಂಗ್ ನವಂಗೆ ಲಾಭ ತಂದರೂ,. ಕಾರ್ಯದ ಮನೆಯವರಿಗೆ ಕಣ್ಣಲ್ಲಿ ನೀರು ತಂದವು.
 
ಇನ್ನೊಂದು ಹುಟ್ಟು ಹಬ್ಬದ ಪಾರ್ಟಿಯೋ ಭರ್ಜರಿ ಅಲಂಕಾರದಿಂದ ಸಿದ್ದ ಗೊಂಡಿದ್ದ ಹಾಲ್ ವೊಂದರಲ್ಲಿ ಅದ್ಧೂರಿಯಾಗಿ ಆಚರಿಸಲು ಸಿದ್ಧ ಗೊಂಡಿತ್ತು. ಡೈನಿಂಗ್ ಹಾಲ್ ನಲ್ಲಿ ನೋಡಿದರೆ ಎಲ್ಲಾ ಕಂಚಿನ ದೊಡ್ಡ ಹರಿವಾಣಗಳಲ್ಲೆ ಬಡಿಸಲು ಸಿದ್ದಗೊಳಿಸಿದ್ದರು.ಆದ್ರೆ ಬಡಿಸುವಾಗ ಮಾತ್ರ ಟೀ ಚಮಚೆ ಗಳಲ್ಲೇ ಎಲ್ಲಾ ವ್ಯಂಜನಗಳ ಬಡಿಸಿದರು.ಅಷ್ಟು ದೊಡ್ಡ ತಟ್ಟೆಯಲ್ಲಿ,ಸುಂದರಿಯೊಬ್ಬಳ ಮುಖದ ಮೊಡವೆ ಗಳಂತೆ ಅಲ್ಲಿಷ್ಟು ಇಲ್ಲಿಷ್ಟು ಇದ್ದ ಖಾದ್ಯಗಳ ನೋಡಿ ಇದ್ದ ಹಸಿವೂ ಇಂಗಿ ಹೋಯಿತು.
 
ನಮ್ಮ ನೆರೆಯ ಕಟ್ಟಡವೊಂದರ ಮಾಲೀಕರು ಬೇರೆ ಊರಿನಲ್ಲಿದ್ದದ್ದರಿಂದ ತಮ್ಮ ಕಟ್ಟಡದ ಗೃಹ ಪ್ರವೇಶಕ್ಕೆ ಓಡಾಡುವುದು ಕಷ್ಟ ವಾಗಿ ,ಸುಲಭಕ್ಕೆ.ಆಗಿ ಬಿಡಲೆಂದು
ಕೇಟರಿಂಗ್ ನವರಿಗೆ ಆರ್ಡರ್ ನೀಡಿದ್ದರು.ಹಿಂದಿನ ದಿನದ ವಾಸ್ತು ಹೋಮ,ಮಾರನೆಯ ಗೃಹಪ್ರವೇಶ ಎಲ್ಲದರ ಭೋಜನದ ವ್ಯವಸ್ಥೆ ಕೇಟರಿಂಗ್ ನವರದೇ.
 
‌'ಗೃಹ ಪ್ರವೇಶಕ್ಕೆ ಅಂತ ಸುಮ್ಮನೆ ಒಂದು ರಜಾ ಯಾಕೆ ವ್ಯರ್ಥ ಮಾಡುವುದು, ಹಿಂದಿನ ದಿನವೇ ವಾಸ್ತು ಹೋಮಕ್ಕೆ ಹೋಗಿ ಶುಭಾಶಯ ತಿಳಿಸಿ ಬಂದರಾಯಿತು' ಎಂದುಕೊಂಡು,ಅದರಂತೆ ನನ್ನ ಮಗಳ ಕರೆದುಕೊಂಡು ಹೊರಟೆ.
‌ಕಟ್ಟಡ ಬಹಳ ಭರ್ಜರಿಯಾಗಿ ಇತ್ತು.ಒಳ ಹೋಗಿ,ಮನೆಯವರಿಗೆ ವಿಶ್ ಮಾಡಿ,ಉಡುಗೊರೆ ನೀಡಿ ಊಟಕ್ಕೆ ಹೊರಟೆವು.ಊಟದ ಪೆಂಡಾಲ್ ನಲ್ಲಿ ಎಲ್ಲೋ ಒಂದಷ್ಟು ಜನ ಇದ್ದರು. ಬಡಿಸುವವ ರು ಒಂದಿಬ್ಬರು ಇದ್ದರು.
‌ಸರಿ ಎಲೆ
‌ ಹಾಕಿ ಬಡಿಸಲು ಪ್ರಾರಂಭ ವಾಯಿತು.ಬಡಿಸಲು ಬಂದವ ಕೇಟರಿಂಗ್ ನ ಓನರ್ ಇರಬೇಕು.ನಮ್ಮ ಬಳಿ ಮೊದಲು ಬಂದವ,"ಮೇಡಂ ಮಗುಗೆ ಉಪ್ಪು ಹಾಕೋದು ಬೇಡ ಅಲ್ಲವಾ"ಅಂದ.ನನಗೆ ಅಚ್ಚರಿಯಾದರೂ "ಓಹೋ,ಇದು ಉಳಿತಾಯದ ಪಾರ್ಟಿ "ಎನ್ನುವುದು ಹೊಳೆದು,ನಗು ಬಂದರೂ ತಡೆದುಕೊಂಡು,"ಪರವಾಗಿಲ್ಲ ಹಾಕಿ"ಎಂದು ಹಾಕಿಸಿದೆ.ನಂತರ ಏನೇ ಬಡಿಸಲು ಬಂದರೂ"ಮಗು ಸ್ವೀಟ್ ತಿನ್ನೋಲ್ಲ ಅನಿಸುತ್ತೆ,ಹಪ್ಪಳ ಬೇಡ ಅಲ್ವಾ,ಕೋಸಂಬರಿ ಮಕ್ಕಳು ತಿನ್ನೊಲ್ಲ ವೇಸ್ಟ್ ಮಾಡ್ತಾರೆ,"ಎನ್ನುತ್ತಾ ನನ್ನ ಮಗಳ ಎಲೆ ಬಹುತೇಕ ಖಾಲಿಯೆ.ಅಂತೂ ಅವಳು ಯಾವಾಗಲೂ ಮಾಡುವಂತೆ ಎಲೆಗೆ ಕೈ ಅಡ್ಡ ಹಿಡಿದು" ಬೇಡ" ಅನ್ನುವ ಕೆಲಸ ಇವನೇ ತಪ್ಪಿಸಿದ. ನನಗೆ ನಗು ಉಕ್ಕಿ ಬರಲು ಶುರುವಾಯಿತು."ಇವನೇನು ಬರೀ ನಮ್ಮಿಬ್ಬರಿಗೆ ಮಾತ್ರವೇ ಈ ರೀತಿ ಮಾಡ್ತಾ ಇದ್ದಾನೋ, ಇಲ್ಲಾ ಬೇರೆಯವರಿಗೂ ಇದೇ ರಾಗವೇ ಎಂದು ಅತ್ತ ಇತ್ತ ನೋಡಿದೆ.ನನ್ನ ಎದುರು ಕೂತಿದ್ದ ಒಬ್ಬರು ಕೂಡಾ ನನ್ನೆಡೆಗೆ ನೋಡುತ್ತ ನಕ್ಕರು.ಅವರ ಪುಟ್ಟ ಮಗನ ಎಲೆ ಕೂಡ ಬಹಳ ಖಾಲಿಯೇ ಇತ್ತು."ಹೋಗಲಿ ಬಿಡು.ಕಾರ್ಯಗಳಲ್ಲಿ ಆಗುವ ಆಹಾರದ ನಷ್ಟಕ್ಕೆ ಹೋಲಿಸಿದರೆ ಇದು ವಾಸಿ" ಅಂದುಕೊಂಡು ಬಡಿಸಿದ್ದನ್ನೆ ಅಚ್ಚುಕಟ್ಟಾಗಿ ತಿಂದು ಇನ್ನೇನು ಏಳುವ ಅಂತಿದ್ದೆ.ಆಗ ಮತ್ತೆ ಬಂದ ಅವನು" ಮೇಡಂ,ನಿಮ್ಮ ಎಲೇಲಿ ಉಪ್ಪಿನಕಾಯಿ ಬಾಕಿ ಇದೆ,ಅದಕ್ಕೊಂದಿಷ್ಟು ಅನ್ನ ಬಡಿಸಲ " ಅಂತ ಕೇಳಿದಾಗ ಮಾತ್ರ ನನಗೆ ನಗು ತಡೆಯ ಲಾಗದೆ,"ಇನ್ನೂ ಬಿಟ್ರೆ ನೀನು,ಬಾಳೆಎಲೆ ಬೇಕಾದ್ರೂ ತಿನ್ನಿಸಿ ಬಿಡ್ತಿಯ,ಬಿಡು"ಅಂದು ನಕ್ಕೆ.ನನ್ನ ಮಾತು ಕೇಳಿ ಕುಳಿತಿದ್ದ ಕೆಲವರೂ ಗೊಳ್ ಎಂದು ನಕ್ಕಾಗ ಪೆಚ್ಚು ಪೆಚ್ಚಾಗಿ ಹಲ್ಲು ಕಿರಿಯುತ್ತಾ ಆತ ಹೋದ.

ಗುರುವಾರ, ಫೆಬ್ರವರಿ 11, 2021

ಅನುವಾದಿತ ಕವಿತೆ.. ಷಹರು ನಿದ್ರಿಸುವ ಚಿತ್ರ




ಅನುವಾದಿತ ಕವಿತೆ

ಶಹರು ನಿದ್ರಿಸುವ ಚಿತ್ರ


aerial view photography of city buildings during nighttime

ಅನವರತ ಕರುಬಿದ್ದಕ್ಕೋ

ಹಲುಬಿದ್ದಕ್ಕೋ

ಅಚಾನಕ್ ಮಹಾನಗರದ ನಡುವಿಗೆ

ಪಾದವಿಡುವಾಗ ಮೈಯೆಲ್ಲ ಪುಳಕ.


ದುಡು ದುಡು ರೈಲು ಹತ್ತಿ

ದಡ ದಡನೆ ಇಳಿಯುವಾಗ

ಕಣ್ಣು ಬಾಡುವ ಹೊತ್ತಲ್ಲಿ

ನಗರ ಪಿಳಿ ಪಿಳಿ ನೋಡುತ್ತಿದೆ


ಬಹುಶ: ನನ್ನನ್ನೇ ಕಾಯುತ್ತಿದ್ದಿರಬೇಕು

ಅಂದುಕೊಂಡೆ.

ಇನ್ನು ಅದೆಷ್ಟು ನನ್ನಂತವರೋ..?!


ನೋಟವನ್ನು ಶೂನ್ಯಕ್ಕೆ ನೆಟ್ಟು

ದೌಡಾಯಿಸುತ್ತಲೇ ಇದ್ದಾರೆ

ಚೋದ್ಯವಲ್ಲ ತಾನೇ? ಮತ್ತೊಮ್ಮೆ

ಚಿವುಟಿಕೊಂಡೆ.


ನನಗೋ ಗಂಟು ನೋವು ಪಾದಕ್ಕಿಳಿದು

ಕುಳಿತುಕೊಳ್ಳುವ ಕಾತರ

ಅವರಿಗೋ ಅದೆಂಥಾ ಆತುರ?


ತಳ್ಳಿಸಿಕೊಂಡ ರಭಸಕ್ಕೆ ಜೋಲು

ಹೊಡೆದಿದ್ದೆ ಅಷ್ಟೆ.

ತೆಕ್ಕೆಗೆ ಬಿದ್ದವರನ್ನ ನಗರ ಕೆಳಕ್ಕೆ

ಬೀಳಿಸುವುದಿಲ್ಲವಂತೆ

ಹೌದೆಂಬುದ ಖಾತ್ರಿ ಪಡಿಸಿಕೊಂಡೆ.


ಬಿಡುವಿಲ್ಲದ ಯಂತ್ರದ ರೆಕ್ಕೆ

ನೆತ್ತಿ ಸವರುವಾಗ

ದಡಲ್ ದಡಲ್ ಸದ್ದು ಎದೆಯ

ನಡುವಿನಿಂದ ಹಾಯುವಾಗ

ನಿದ್ರೆ ಮರೆತ ಶಹರು ಝಗಮಗಿಸುವಾಗ

ನಾನೋ ಜಾತ್ರೆಯಿರಬೇಕೆಂದುಕೊಂಡೆ.


ಅಬ್ಭಾ! ಓಡಿ ಓಡಿ ಸುಸ್ತಾಗಿ

ನನ್ನೂರಿಗೆ ಸಾವಕಾಶವಾಗಿ ಕಾಲಿಳಿಸಿ

ದಣಿವು ನೀಗಿಸಿಕೊಳ್ಳುತ್ತಿದ್ದೇನೆ.

ಶ್..! ಊರೀಗ ಸಕ್ಕರೆ ನಿದ್ರೆಯಲ್ಲಿದೆ.


ಪ್ರಭುವೇ..

ಇನ್ನೇನು ಬೇಡಲಾರೆ ಹೆಚ್ಚಿಗೆ.


ಸಾಕ್ಷಾತ್ಕಾರವೆನ್ನಲೇ? ಸತ್ಯದರ್ಶನವೆನ್ನಲೇ?

ಊಹೆ ಕೆಲವೊಮ್ಮೆ ಮಾಯೆಯೇ ದಿಟ

ದೂರದಿಂದ ನುಣ್ಣಗೆಯೇ ಬೆಟ್ಟ.


ನನ್ನ ನಿದ್ರೆಯಲ್ಲೂ, ಎಚ್ಚರದಲ್ಲೂ

ಕನಸಿನಲ್ಲೂ, ಪ್ರಾರ್ಥನೆಯಲ್ಲೂ ಈಗ

ಶಹರು ನಿದ್ರಿಸುವ ಚಿತ್ರ.


ಸ್ಮಿತಾ ಅಮೃತ್ರಾಜ್



The picture of a sleeping Metro..


I just don’t know,

whether it was because of

my yearning or envying,

Thrilled all over

when stepped in to

the heart of a Metro..


When hurriedly got in

And hastily got down the train,

The Metro was blinking it’s eyes

at a time when eyelids were dropping..


“Might be waiting for me only”

Thought I.

But how many like me are

Might be there…?!


Sight fixed at nowhere

All are hurrying.

“Isn’t it a wonder”

I pinched myself again.


I was eager to sit

when the pain in the joints

Dripped down to the feet,

But what kind of haste they have?


Was about to fall by a rushing push,

But got assured of the fact that

the city will not let the ones

in its arms to fall down.


When the restless wing of the machine

Was caressing the scalp,

Bang Bang sound was

passing through the heart,

And when the insomniac Metro

Was shining and glistening

I thought of it as a fair.


Oh! Got tired of running and running,

Came back slowly and

Getting rid of the tiredness.

Shh! My place is in a sweet sleep.


My lord…

I will not ask for more.


Shall I call it an intuition or enlightenment?

Sometimes illusion becomes

the ultimate truth.

Greener is the grass,

on the other side of the fence.


And now in my sleep, awareness

dreams and prayers too,

I see the picture of the Metro sleeping.


Translated by Samatha.R




22 23 24 25 26 27 28

« Jan    

ವಿಶೇಷ ಸೂಚನೆ

copy rights resrved(ಇಲ್ಲಿನ ಎಲ್ಲ ಬರಹಗಳೂ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ.) ಈಬರಹಗಳ ಎಲ್ಲಾ ಅಭಿಪ್ರಾಯಗಳೂ ಲೇಖಕರ ವೈಯುಕ್ತಿಕ ಅಭಿಪ್ರಾಯಗಳಾಗಿದ್ದು,ಸಂಗಾತಿ ಬ್ಲಾಗ್ ಅದಕ್ಕೆ ಹೊಣೆಯಾಗಿರುವುದಿಲ್ಲ

ಬುಧವಾರ, ಡಿಸೆಂಬರ್ 9, 2020

ಗಾಂಧಿ ಕವಿತೆ ಅನುವಾದ.

 https://sangaati.com/?p=14536

Skip To Content

ಸಂಗಾತಿ

ಸಂಗಾತಿ


ಸಾರ್ಥಕ ಬದುಕಿನ ಸಾಹಿತ್ಯ ಸಂಗಾತಿ


Menu

Search

Home


ಅನುವಾದ

November 27, 2020admin

ಅನುವಾದಿತಕವಿತೆ


ನನ್ನ ಗಾಂಧಿ


ಕನ್ನಡಕ್ಕೆ: ಶೈಲಜಾ ಬಿ.


ಇಂಗ್ಲೀಷಿಗೆ: ಸಮತಾ ಆರ್.


Mahatma Gandhiji

ನನ್ನ ಗಾಂಧಿ


ಬೋಳು ತಲೆ ಕಣ್ಣಲ್ಲಿ ಚಾಳೀಸು

ಕೈಯಲ್ಲಿ ಕೋಲು

ಮುಖದಲೊಂದು ಮಾಗಿದ ನಗೆಯ

ಗಾಂಧಿ ನನ್ನೊಳಗೆ ನೀನು

ತಾತನಾಗಿ ಹುಟ್ಟಿದೆ


ಹೆಡ್ ಮಾಸ್ತರರ ಕೋಣೆಯ

ಗೋಡೆಯ ಮೇಲೆ

ಪೋಟೋದಲ್ಲಿ ನೀನಿದ್ದೆ

ವರುಷದಲ್ಲಿ ಮೂರು ಬಾರಿ

ನನ್ನ ಕೈಗೂ ನಿಲುಕಿ

ಚೌಕಟ್ಟು ತಿಕ್ಕಿ ಗಾಜು ಒರೆಸಿ

ಹೂಮಾಲೆ ಹಾಕಿ ಜೈಕಾರ ಕೂಗಿ

ಲಡ್ಡು ತಿನ್ನುವಾಗ

ಬಾಯಿ ತುಂಬ ಸಿಹಿ

ಮನದಲ್ಲಿ ಖುಷಿ


ಬೆಳೆದಂತೆ ನಾನು ನೀನೂ ಬೆಳೆದೆ

ತಾತ ಮಹಾತ್ಮನಾದೆ

ಸರಳ ಸತ್ಯ ಅಹಿಂಸೆಗಳ

ಸಾಕಾರ ಮೂರ್ತಿಯಾದೆ

ಬೆಳಕಾದೆ


ಧಮನಿಯಲಿ ಬಿಸುಪು

ಮನದಲ್ಲಿ ಹುರುಪು

ತುಂಬಿದ್ದ ಕಾಲದಲಿ

ಹೊನಲಿಗೆದುರು ಈಜುವ ಕನಸಿತ್ತು

ಕಂಗಳಲಿ ನಿನ್ನ ಬಿಂಬವಿತ್ತು


ನಿನ್ನ ಹಾಗೆ ಚಾಳೀಸು

ನನಗೂ ಬಂದಿದೆ ಈಗ

ಕಚೇರಿಯ ನನ್ನ ಕುರ್ಚಿಯ ಹಿಂದೆ

ನಿನ್ನ ಪಟ ತೂಗು ಹಾಕಿರುವೆ


ಕಣ್ಣಾಡಿಸುವೆ ಹೆಣ್ಣಿನ ಮೇಲೆರಿಗಿದ

ರಕ್ಕಸರ ಎಫ್ ಐ ಆರ್

ಪ್ರತಿಗಳ ಮೇಲೆ

ಪಾನಮತ್ತ ಪಿಶಾಚಿ ಪತಿಯ

ಕತೆ ಹೇಳುವ ಡಿ ಐ ಆರ್ ನ

ಪುಟಗಳ ಮೇಲೆ

ಹತ್ತಿಕ್ಕುವೆ ಎದೆಯೊಳಗೆ

ಭುಗಿಲೇಳುವ ಹೊನಲ

ಅದು ಪಾದಮಸ್ತಕಾದಿಯಾಗಿ ಹರಿದು

ಪೆನ್ನಿನ ತುದಿಯಲ್ಲಿ ಸ್ತಬ್ದವಾಗುವುದು


ಬಾಪೂ ನಿನ್ನ ಚರಿತೆ

ಅರಿವುದೆಷ್ಟು ಸುಖವೋ

ಆ ಹಾದಿಯ ತುಳಿವ

ಸುಖವೂ ನನ್ನೀ ಆತ್ಮಕ್ಕಿರಲಿ


My Gandhi..


Bald head,spectacled eyes,

A stick in hands,

A smile on ur wrinkled face,

Gandhi you were born as a

Grandpa in me.


You were in a photo

On a wall of the chamber

Of our headmaster.

Even I could reach you

Thrice in a year.


When we were eating a laddu

After scrubbing the frame,

Cleaning the glass,

Decorating with a garland,

And hailing a Jai

Sweetness in my mouth,

And happiness filled my heart.


You too grew along with me,

Grandpa became a Mahatma,

You became an embodiment

Of simple truth,non violence

And lit our path.


At a time when there was

Warmth in veins, spirit in the heart,

Dreamt of swimming against the tide,

Your image was in my eyes.


Now I too have got

spectacles like you.

Hanging a portrait of yours

On the wall behind my chair

In my office.


I am glancing the FIRs

Of the devils who pounced

Upon the girls.

DIR pages telling the stories

Of drunken demonic husbands.


I Control the flamming river

In my heart,that flows throughout

From head to toe

and settles at the tip of the pen.


Bapu, how cheerful I become

knowing your story,

Let the same happiness fill my soul,

While treading your path.


*******************************









ವಿಚಿತ್ರ ಆಸೆಗಳು ಹೀಗೊಂದಿಷ್ಟು,.

 https://sangaati.com/?p=15018

 ವಿಚಿತ್ರ ಆಸೆಗಳು...ಹೀಗೊಂದಷ್ಟು,


"ಕಕ್ ಕಕ್ ಕಕ್ ಕೊಕ್ಕೋಕ್ಕೊ" ಅಂತ ಒಂದು ಬಿಳಿ,ಬೂದು,ಕೆಂಪು ಬಣ್ಣದ ರೆಕ್ಕೆ ಪುಕ್ಕಗಳ,ಅಂಗೈ ಅಗಲದ ಜುಟ್ಟಿದ್ದ,ಕಮ್ಮಿ ಅಂದರೂ ನಾಲ್ಕೈದು ಕೆಜಿ ತೂಗುತ್ತಿದ್ದ ಗಿರಿರಾಜ ಹುಂಜ ವೊಂದು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಗತ್ತಿನಿಂದ ,ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾಗ,ಸುತ್ತ ನಾಲ್ಕೈದು ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿಕೊಂಡು ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಕಲಿಸುತ್ತಿದ್ದ ನನಗೆ ಎಷ್ಟು ಪ್ರಯತ್ನ ಪಟ್ಟರೂ ಆ ಹುಂಜನಿಂದ ಕಣ್ಣು ಕೀಳ ಲಾಗಲಿಲ್ಲ.

ನನ್ನಿಂದ ಅನತಿ ದೂರದಲ್ಲಿ ಕುಳಿತಿದ್ದ ನನ್ನ ಸಹೋದ್ಯೋಗಿ ಗೆಳತಿ ನಾನು ಹುಂಜವನ್ನೆ ನೋಡುತ್ತಿರುವುದನ್ನು ಕಂಡು,ನನ್ನ ಕೋಳಿ ಪ್ರೀತಿ ಅರಿತಿದ್ದ ಆಕೆ"ಮೇಡಂ ,ಕೋಳಿ ಅನಾಟಮಿ ಆಮೇಲೆ ಮಾಡಿದ್ರಾಯಿತು,ಈಗ ಮಕ್ಕಳ ಕಡೆ ಗಮನ ಕೊಡಿ" ಎಂದು ನಕ್ಕಾಗ ನಾಚಿಕೆ ಎನಿಸಿ ಮತ್ತೆ ಪಾಠದ ಕಡೆ ಮರಳಿದೆ.


ಇದಾಗಿದ್ದು ಹೇಗೆಂದರೆ, ಕರೋನ ಕಾರಣ ದಿಂದಾಗಿ,ಶಾಲೆಗಳು ತೆರೆಯಲಾಗದೆ ಶಿಕ್ಷಕರೇ ಮಕ್ಕಳಿರುವ ಕಡೆ ಹೋಗಿ ಕಲಿಸುವ ವಿದ್ಯಾಗಮ ಎನ್ನುವ ಕಾರ್ಯಕ್ರಮದಡಿಯಲ್ಲಿ,ನನಗೆ ಮತ್ತು ನನ್ನ ಗೆಳತಿಗೆ ಹಂಚಿಕೆಯಾದ ಏರಿಯಾಗಳಲ್ಲಿ, ಒಂದು ವಿಶಾಲವಾದ ತೋಟದ ಮನೆಯ ಅಂಗಳದಲ್ಲಿ ಮಕ್ಕಳ ಕೂರಿಸಲು ಒಂದು ವರಾಂಡ ಬಳಸಿಕೊಳ್ಳಲು ಅವಕಾಶ ಸಿಕ್ಕಿತು.

 ತೋಟದ ಮನೆ ಅಂದ ಮೇಲೆ ಕೇಳಬೇಕೆ,ಎಲ್ಲೆಲ್ಲೂ ಹಸಿರು,ಶುದ್ಧವಾದ ಗಾಳಿ,ಬೆಳಕು,ಕಲಿಕೆಗೆ ಒಳ್ಳೆಯ ವಾತಾವರಣ ಅನ್ನಿಸಿ,ನಾವಿಬ್ಬರೂ ಬೇರೆ ಬೇರೆ ಗುಂಪು ಗಳಲ್ಲಿ ಕುಳಿತು ಕಲಿಸುತ್ತಿದ್ದಾಗಲೇ ಆ ಹುಂಜ ಬಂದು ನಮ್ಮ ಮನ ಸೆಳೆದದ್ದು.


ಅಂತೂ ತರಗತಿಗಳ ಮುಗಿಸಿ ನಾವಿಬ್ಬರೂ ಮರಳಿ ಹಿಂದಿರುಗುವಾಗ ನಾನು ನನ್ನ ಗೆಳತಿಗೆ"ಅಲ್ಲರಿ, ತೋಟದ ಮನೆ ಇದ್ರೆ ಎಷ್ಟು ಚಂದ ಅಲ್ವಾ,ಹಸು,ಕುರಿ,ಕೋಳಿ ,ನಾಯಿ ,ಬೆಕ್ಕು ಎಲ್ಲಾ ಸಾಕೊಂಡು ಇರಬಹುದಿತ್ತು.ದಿನ ನಿತ್ಯ ಮನೆ ಕೆಲಸ,ಹೊರಗಿನ ಕೆಲಸ ಅಂತ ದಣಿಯೋದಕ್ಕಿಂತ ಎಷ್ಟೋ ವಾಸಿ"ಎಂದು ಕೊರಗಿದಾಗ ಅವರು"ಹೌದಪ್ಪ,ನನಗಂತೂ ಗಿಡ,ಮರ,ಪ್ರಾಣಿ,ಪಕ್ಷಿ ಎಲ್ಲಾ ಇರೋ ಮನೆ ಬೇಕು ಅನಿಸುತ್ತೆ, ಈ ಕಾಲದಲ್ಲಿ ಅದೆಲ್ಲ ನಮ್ಮ ಕೈ ಗೆಟುಕದ ಆಸೆಗಳೆ ಬಿಡಿ,ಈಗಿನ ರೇಟ್ ನಲ್ಲಿ ತೋಟದ ಮನೆ ಮಾಡಿದ ಹಾಗೆಯೇ"ಎಂದವರು,

"ಮೇಡಂ ನನಗೆ ಒಂದು ವಿಚಿತ್ರ ಆಸೆಯಿತ್ತು,ಯಾರಿಗೂ ಹೇಳಿಲ್ಲ,ನಿಮಗೆ ಹೇಳ್ತೀನಿ ,ನಗೋದಿಲ್ಲ ತಾನೇ"ಎಂದಾಗ,ನನಗೆ ಕುತೂಹಲ ತಡೆಯಲಾರದೆ,"ಛೆ ಖಂಡಿತ ಇಲ್ಲ,ಅದೇನು ಹೇಳಿ "ಎಂದೆ.


"ಅದೂ,ನನಗೆ ಚಿಕ್ಕಂದರಿಂದ ಒಂದು ಕೋಳಿ ಫಾರ್ಮ್ ಮಾಡೋ ಆಸೆ ಇದೆ,ಚೆನ್ನಾಗಿ ಕೋಳಿ ಸಾಕಿ,ಒಂದು ಆಪೆ ಆಟೋದಲ್ಲಿ ಹಾಕ್ಕೊಂಡು,ಅಂಗಡಿ ಅಂಗಡಿಗೆ,ನಾನೇ ಆಪೆ ಓಡಿಸ್ಕೊಂಡು ಹೋಗಿ ಸಪ್ಲೈ ಮಾಡ್ಕೊಂಡು,ವ್ಯವಹಾರ ಮಾಡ್ಬೇಕು ಅನ್ನಿಸುತ್ತಿತ್ತು,"ಎಂದಾಗ, ನಗೋದಿಲ್ಲ ಅಂತ ಹೇಳಿದ್ರೂ ನನ್ನಿಂದ ತಡೆಯಲಾರದೆ ನಗು ಕಟ್ಟೆಯೊಡೆದು ಹರಿಯಲಾರಂಭಿಸಿತು. ಅವರೂ ನಗುತ್ತಾ"ನೋಡಿದ್ರ ನಾನ್ ಹೇಳ್ಳಿಲ್ವ,ವಿಚಿತ್ರ ಆಸೆ ಅಂತಾ"ಅಂತ ಹೇಳಿ ತಾವೂ ನಗುವಿಗೆ ಜೊತೆಯಾದರು.


ಮಾರನೆಯದಿನ ಶಾಲೆಯಲ್ಲೂ ಇದೇ ವಿಷಯದ ಚರ್ಚೆ ಮತ್ತು ನಗು.ಎಲ್ಲರ ಮನದಾಳದ ಆಸೆಗಳು ಹೇಳಿಕೊಳ್ಳ ಲು ಆಗದಿರುವುವು ಆಚೆ ಬರಲಾರಂಭಿಸಿದವು.


ನನ್ನ ಸಹೋದ್ಯೋಗಿಯೊಬ್ಬರು ಮೆಲು ಮಾತಿನ,ಮೃದು ಸ್ವಭಾವದ, ಸಾಂಪ್ರದಾಯಿಕ ಉಡುಗೆ ತೊಡುಗೆಗಳ,ದೇವರು ದಿಂಡಿರ ಮೇಲೆ ಅಪಾರ ನಂಬಿಕೆ ಭಕ್ತಿ ಹೊಂದಿರುವ ಮಹಿಳೆ.ಅವರ ಆಸೆ ಮಾತ್ರ,ಅವರ ಬಾಯಲ್ಲೇ ಕೇಳಿದಂತೆ"ನನಗಂತೂ ಒಂದು ಬುಲ್ಲೆಟ್ ಬೈಕ್ ತೊಗೊಂಡು, ಬ್ಯಾಕ್ ಪ್ಯಾಕ್ ಹಾಕ್ಕೊಂಡು ಇಡೀ ಪ್ರಪಂಚ ಸುತ್ತಬೇಕು ಅನ್ನೋ ಆಸೆ ಇದೆ"ಎನ್ನುವುದನ್ನು ಕೇಳಿ,ಸಾಂಪ್ರದಾಯಿಕ ಮನಸ್ಸಲ್ಲಿ ಆಧುನಿಕತೆಗೆ ತುಡಿಯುವ ಚೈತನ್ಯವೂ ಇದೆ ಎನ್ನಿಸಿ ಖುಷಿಯಾಯಿತು.


ಮರುದಿನ ಗೆಳತಿಯೊಬ್ಬಳು ಕರೆಮಾಡಿ ಹರಟುತ್ತಿದ್ದಾಗ ಅವಳಿಗೆ ಈ ಆಸೆಗಳ ವಿಷಯಗಳ ಹೇಳಿದಾಗ ಅವಳು"ಅಯ್ಯೋ ಅದಕ್ಕೇನು,ನನಗಂತೂ ದಿನಕ್ಕೊಂದು ರೀತಿಯ ವಿಚಿತ್ರ ಆಸೆಗಳು ಬರುತ್ತವೆ,ಯಾರ ಹತ್ತಿರ ಹೇಳೋದು? ನನಗೆ ನಾನೇ ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತೇನೆ.ಮೊನ್ನೆ ದಿನ ಏನಾಯಿತು ಗೊತ್ತಾ ನನ್ನ ಗಂಡನ ಸ್ನೇಹಿತರೊಬ್ಬರ ಕುಟುಂಬ ಮೊದಲ ಬಾರಿ ನಮ್ಮ ಮನೆಗೆ ಯಾವುದೋ ಊರಿಂದ ಬರುತ್ತಾ ಇದ್ದರು,ನಾನು ಅಡಿಗೆ ಎಲ್ಲಾ ಮಾಡಿಕೊಂಡು ಸತ್ಕಾರ ಮಾಡಲು ರೆಡಿಯಾಗಿದ್ದೆ .

ಮಧ್ಯಾಹ್ನದಷ್ಟರಲ್ಲಿ ಅವರೆಲ್ಲ ಬಂದು ನನ್ನ ಗಂಡ ಪರಸ್ಪರ ಪರಿಚಯ ಕೂಡ ಮಾಡಿ ಕೊಟ್ಟರು, ಇವರ ಆ ಸ್ನೇಹಿತ ಎಷ್ಟು ಮುದ್ದು ಮುದ್ದಾಗಿದ್ದ ಅಂದರೆ ನನಗೆ ಇದ್ದಕ್ಕಿದ್ದಂತೆ ಆ ಮನುಷ್ಯನನ್ನು ನೋಡಿ ಚಿಕ್ಕ ಮಕ್ಕಳನ್ನು ನೋಡಿದರೆ ಎತ್ತಿಕೊಳ್ಳಬೇಕು ಅನ್ನೋ ಆಸೆಯಾಗುವುದಿಲ್ಲವ ಆ ರೀತಿ ಅನ್ನಿಸಿಬಿಟ್ಟಿತು. ಈ ಹುಚ್ಚಿಗೇನು ಹೇಳುವುದು.ನನ್ನ ಗಂಡನಿಗೆ ಹೇಳುವ ಧೈರ್ಯ ನನಗಾಗಲಿಲ್ಲ.ಬಚ್ಚಲು ಮನೆಗೆ ಹೋಗಿ ಜೋರಾಗಿ ನಕ್ಕು ಸುಮ್ಮನಾದೆ" ಎಂದಾಗ ಸೋಜಿಗ ವೆನಿಸಿ"ಅಲ್ಲ ಕಣೇ ಯಾಕೆ ಹಾಗನ್ನಿಸಿದ್ದು,ನೀನು ನೋಡಿದರೆ ಗೌರಮ್ಮನ ಹಾಗೆ ಇರ್ತಿಯಾ ಯಾವಾಗಲೂ,ಅದು ಯಾಕೆ ಅವನ ಮೇಲೆ ಹಾಗೆ ಅನ್ನಿಸಿತು"ಅಂದಿದಕ್ಕೆ,"ಗೊತ್ತಿಲ್ಲ ಕಣೆ,ಏನೋ ಆ ಕ್ಷಣ ಹಾಗನ್ನಿಸಿತು,ಆಮೇಲೆ ಅವರೆಲ್ಲ ಹೋದ ಮೇಲೆ ಏನೂ ಅನ್ನಿಸಲಿಲ್ಲ"ಎಂದು ಸುಮ್ಮನಾದಳು.


ಹುಡುಕುತ್ತಾ ಹೋದರೆ ಪ್ರತಿಯೊಬ್ಬರಲ್ಲೂ ಈ ರೀತಿ " ಯಾರಿಗಾದರೂ ಹೇಳಿದರೆ ನಗೆಪಾಟಲಿಗೆ ಈಡಾಗುವೆನೇನೋ " ಅನ್ನಿಸುವ,ಮುಗ್ದ,ವಿಚಿತ್ರ ಬಯಕೆಗಳು ಇದ್ದೇ ಇರುತ್ತವೆ.ಮಕ್ಕಳಂತೂ ಬಿಡಿ, ಕೇಳುತ್ತಾ ಹೋದರೆ ಒಂದು ಕಿನ್ನರ ಪ್ರಪಂಚವನ್ನೇ ಸೃಷ್ಟಿ ಮಾಡುವಷ್ಟು ಕಥೆಗಳ ಹೇಳಿಯಾರು.


ನನ್ನ ಮಕ್ಕಳಿಬ್ಬರೂ ಚಿಕ್ಕವರಿದ್ದಾಗ ನನ್ನ ಮನೆ ಕೆಲಸದ ಸಹಾಯಕ್ಕೆ ಸಾವಿತ್ರಮ್ಮ ಅಂತ ಒಬ್ಬರು ಮಹಿಳೆ ಬರುತ್ತಿದ್ದರು.ನನ್ನ ಶಾಲೆ ಮನೆಯಿಂದ ದೂರ ಇದ್ದುದರಿಂದ ದಿನವೂ ಬೆಳಿಗ್ಗೆ ಎದ್ದು ತರಾತುರಿಯಲ್ಲಿ ಹೊರಟು ಹೋಗುವ ಧಾವಂತದಲ್ಲಿರುತ್ತಿದ್ದ ನಾನು ಮಕ್ಕಳ ಮಾತುಗಳ ಕಡೆಗೆ ಅಷ್ಟು ಗಮನ ನೀಡಲು ಆಗದೆ,ಸುಮ್ಮನೆ ಅವರು ಹೇಳಿದ್ದಕ್ಕೆಲ್ಲಾ "ಹೂಂ" ಗುಟ್ಟಿ ಕೊಂಡು ಇರುತ್ತಿದ್ದೆ.ಅವರು ಹೇಳಿದ್ದಕ್ಕೆ ಸರಿಯಾದ ಉತ್ತರ ನನ್ನಿಂದ ಬಾರದ ಕಾರಣ ಅವರ ಗಮನವೆಲ್ಲ ಸಾವಿತ್ರಮ್ಮನ ಕಡೆ ತಿರುಗಿತು. ಅವಳೋ ಕೆಲಸ ಮಾಡಿಕೊಂಡೇ ಮಕ್ಕಳ ಜೊತೆ ಮಾತೇ ಮಾತು."ಹೌದಾ ಪುಟ್ಟಾ,ಆಮೇಲೆ,ಓಹ್ ಹಂಗಾ,ಅಯ್ಯೋ ನಂಗೆ ಗೊತ್ತೇ ಇರಲಿಲ್ಲ"ಹೀಗೆ ಮಕ್ಕಳ ಜೊತೆ ಮಕ್ಕಳಾಗಿ ಮಾತನಾಡುತ್ತಾ ಇರುತಿದ್ದವಳನ್ನು ಮಕ್ಕಳಿಬ್ಬರೂ ಬಹಳ ಹಚ್ಚಿಕೊಂಡು ಬಿಟ್ಟಿದ್ದರು.ಅವರಿಗೆ ಗೊತ್ತಿದ್ದ ಭೂಮಿ ಮೇಲಿರೋ ವಿಷಯವನ್ನೆಲ್ಲ ಅವಳ ಕಿವಿಗೆ ತುಂಬಬೇಕು.ನನಗೆ ಕೆಲವು ಬಾರಿ ಅವರ ಕುಚೇಷ್ಟೆಯ ಮಾತುಗಳಿಗೆ ರೇಗಿ ಹೋದರೂ ಅವಳು ಮಾತ್ರ ಒಂದು ದಿನವೂ ಬೇಸರಿಸಿದವಳೇ ಅಲ್ಲ.


ಆಗ ಒಂದು ದಿನ ಸಂಜೆ ಸುಮ್ಮನೆ ಕುಳಿತಿದ್ದಾಗ ಮಕ್ಕಳನ್ನು "ದೊಡ್ಡವರಾದ ಮೇಲೆ ಏನಾಗಬೇಕು ಅನ್ನೋ ಆಸೆ ಇದೆ "ಎಂದು ಕೆಣಕಿದೆ,ನನ್ನ ಮಗಳು ಪಟ್ ಅಂತ " ನಾನಂತೂ ದೊಡ್ಡವಳಾದ ಮೇಲೆ ಮನೆ ಮನೆಗೆ ಹೋಗಿ ಪಾತ್ರೆ ತೊಳೆಯುವ ಸಾವಿತ್ರಮ್ಮ ಆಗ್ತೀನಿ"ಅಂತ ಘೋಷಿಸಿಯೆ ಬಿಟ್ಟಳು. ಆ ಉತ್ತರವನ್ನು ಕೇಳಿ ನಿಬ್ಬೆರಗಾದ ನನಗೆ ನಗು ತಡೆಯದಾದರೂ, ಮಕ್ಕಳ ನಿಷ್ಕಲ್ಮಶ ಮನಸ್ಸನ್ನು ಪ್ರೀತಿ ಸೆಳೆಯುವಷ್ಟು ಮತ್ತೇನೂ ಸೆಳೆಯದು ಅನ್ನಿಸಿತು. ಮಾರನೇ ದಿನ ಸಾವಿತ್ರಮ್ಮನಿಗೆ ಹೇಳಿದಾಗ ಅವಳ ಕಣ್ಣಾಲಿಗಳು ತುಂಬಿ ಬಂದು"ಅಯ್ಯೋ ನನ್ನ ಕಂದಾ" ಎಂದು ಮಗಳ ಮುದ್ದಿಸಿದ್ದೇ ಮುದ್ದಿಸಿದ್ದು.


ಇನ್ನು ಶಾಲೆಯಲ್ಲಿ ಮಕ್ಕಳನ್ನು "ದೊಡ್ಡವರಾದ ಮೇಲೆ ಏನಾಗಬೇಕು ಅಂದುಕೊಂಡಿದ್ದೀರಿ ಎಂದು ಹೇಳಿ" ಎಂದು ಕೇಳಿದರೆ,ದೊಡ್ಡ ಮಕ್ಕಳಾದರೆ,"ಡಾಕ್ಟರ್,ಎಂಜಿನಿಯರ್, ಆರ್ಮಿ,ಡ್ರೈವರ್,ಪೊಲೀಸ್ ,ಟೀಚರ್"ಅಂತೆಲ್ಲ ಉತ್ತರ ಹೇಳಿದರೆ,ಚಿಕ್ಕವರಲ್ಲಿ, ಹುಡುಗರೆಲ್ಲ ದೊಡ್ಡ ಲಾರಿಯಿಂದ ಶುರುವಾಗಿ ರೈಲಿನವರೆಗೆ ಪ್ರಪಂಚದಲ್ಲಿರುವ ಎಲ್ಲಾ ವಾಹನಗಳನ್ನು ಓಡಿಸುವವರೆ.ಕೋಳಿ ,ಮೀನಂಗಡಿ ಇಡುವವರು, ಐಸ್ಕ್ರೀಮ್ ಡಬ್ಬದಲ್ಲಿ ಹೊತ್ತು ಮಾರುವವರು,ಸೈಕಲ್ ರಿಪೇರಿ,ಮೊಬೈಲ್ ರಿಪೇರಿ ಅಂಗಡಿ ಇಡುವವರು ಎಲ್ಲಾ ಸಿಕ್ಕರು.ಹುಡುಗಿಯರಲ್ಲಿ ಮಾತ್ರ ಬಹಳಷ್ಟು ಜನಕ್ಕೆಅವರ ಟೀಚರ್ ಥರ ಆಗೋ ಆಸೆ.


ಇಷ್ಟೆಲ್ಲಾ ಹೇಳಿ ಇನ್ನು ನನ್ನ ಆಸೆ ಹೇಳದೆ ಇದ್ದರೆ ಹೇಗೆ.ಆಗಿನ್ನೂ ಹೈಸ್ಕೂಲ್ ನಲ್ಲಿದ್ದೆ.ಅಪಾರ ಓದುವ ಹುಚ್ಚಿದ್ದ ಅಪ್ಪ ತರುವ ಪುಸ್ತಕಗಳನ್ನೆಲ್ಲಾ ನಾನೂ ಓದುವ ಚಪಲ.ಒಂದು ದಿನ ಅಪ್ಪ ಒಂದು ಚಿಕ್ಕ ಪುಸ್ತಕ ತಂದು ಅದನ್ನು ಓದಲು ಕುಳಿತವರು ಮುಗಿಯುವ ತನಕ ಮೇಲೇಳಲೆ ಇಲ್ಲ.


ಮಾರನೇ ದಿನ ನಾನು ' ಇದ್ಯಾವ ಪುಸ್ತಕ' ಅನ್ನೋ ಕುತೂಹಲದಿಂದಾಗಿ ನೋಡಿದರೆ,ಅದು ಜಪಾನಿನ ಕೃಷಿ ವಿಜ್ಞಾನಿ ಮಸನೊಬು ಫುಕುವೋಕ ರವರ ,ಪೂರ್ಣಚಂದ್ರ ತೇಜಸ್ವಿಯವರು ಅನುವಾದಿಸಿದ್ದ

"ಒಂದು ಹುಲ್ಲೆಸಳ ಕ್ರಾಂತಿ"ಪುಸ್ತಕ.

ಓದಲು ಕುಳಿತಿದ್ದೆ ಬಂತು,ಮುಗಿಸುವ ತನಕ 

  ಕೈಬಿಡಲು ಮನಸ್ಸಾಗಲಿಲ್ಲ. 


 ಆ ಪುಸ್ತಕ ಒಳಗೊಂಡಿದ್ದ , ಫುಕುವೊಕರವರ, 'ನಿಸರ್ಗದೊಂದಿಗೆ ಹೊಂದಿಕೊಂಡು ಮನುಷ್ಯ ನೆಮ್ಮದಿ ಯಾಗಿ ಹೇಗೆ ಬದುಕಬಹುದೆಂಬ ವಿಚಾರ ಧಾರೆ,ಅವರ ನೈಸರ್ಗಿಕ ಕೃಷಿ ಪದ್ಧತಿ ಅನುಭವಗಳು , ಮನುಷ್ಯ ಹೇಗೆ ಪ್ರಕೃತಿಯ ಒಂದು ಭಾಗ ಮಾತ್ರ ' ಎಂದೆಲ್ಲ ವಿವರಿಸಿದ್ದ ವಿಷಯಗಳು ,ಆಗ ಎಷ್ಟು ಇಷ್ಟವಾಯಿತೆಂದರೆ ತೊಗೊ ಅವತ್ತಿನಿಂದಲೆ ಕನಸು ಮನಸ್ಸಲ್ಲೆಲ್ಲ ನನ್ನದೇ ಆದ ಒಂದು ನೈಸರ್ಗಿಕ ಕೃಷಿ ಪದ್ಧತಿಯ ತೋಟ ಕಾಡ ಲಾರಂಭಿಸಿತು.ಆದರೆ ಯಾರಿಗಾದರೂ ಹೇಳುವುದುಂಟ!


ಶಾಲೆಯಲ್ಲಿ ಆಗ ಒಂದು ಪರೀಕ್ಷೆಯಲ್ಲಿ ಕೇಳಿದ್ದ "ನಿಮ್ಮ ಭವಿಷ್ಯದ ಕನಸು "ಅನ್ನೋ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದಾಗ, ಪುಟಗಟ್ಟಲೆ ನನ್ನ ತೋಟದ ಕನಸಿನ ಬಗ್ಗೆ ಬರೆದಿದ್ದು ಬರೆದಿದ್ದೇ.ಆದರೆ ಆ ಕನಸು ನನಸಾಗುವುದು ಸಾಧ್ಯವೇ? ತವರು ಮನೆ ಜಮೀನು ಅಣ್ಣ ತಮ್ಮಂದಿರದ್ದು,ಗಂಡನ ಮನೆ ಜಮೀನು ಗಂಡನದ್ದು.ಆಸೆಯ ಹೇಳಿದರೆ ಸಿಗುವ ಉತ್ತರ "ನಿನಗೆ ತಲೆ ಕೆಟ್ಟಿದೆ"ಅಂತ.


ಬಹುಶಃ ಕನಸು ಕಾಣುವುದು,ಆಸೆಗಳ ಪಡುವುದು ಹೆಣ್ಣು ಗಂಡುಗಳಿಬ್ಬರಿಗೂ ಸಾಮಾನ್ಯವಾಗಿ ಬಂದಿರುವ ಗುಣಗಳೇ. ಆದರೆ ಗಂಡು ಮಕ್ಕಳ ಆಸೆ ಕನಸುಗಳೆಂದೂ ವಿಚಿತ್ರ ವೆನಿಸುವುದಿಲ್ಲ. ಏನಾದರೂ ಭಿನ್ನ ಮಾರ್ಗದಲ್ಲಿ ಯೋಚಿಸಿ ಅದನ್ನು ಸಾಕಾರ ಮಾಡಿಕೊಳ್ಳಲು ಹೊರಟರೆ ಅವರು ಕಷ್ಟ ಪಟ್ಟು ಕೆಲಸ ಮಾಡಿದರೆ ಸಾಕು, ಅಂದುಕೊಂಡಿದ್ದೆಲ್ಲ ಸಿಕ್ಕರೂ ಸಿಗಬಹುದು.ಆದರೆ ಹೆಣ್ಣು ಮಕ್ಕಳ ಅಸಾಮಾನ್ಯ ಕನಸುಗಳು ಬಾಯಿಂದ ಆಚೆ ಬರಲೂ ಅಸಾಧ್ಯ ಧೈರ್ಯ ಬೇಕು,ಅಕಸ್ಮಾತ್ ಹೇಳಿಕೊಂಡರೂ ಅದನ್ನು ಸಹಜವಾಗಿ ಸ್ವೀಕರಿಸುವುದು ಎಲ್ಲರಿಂದ ಆಗದು. ಬಹುಶಃ ಮೇಲ್ವರ್ಗದವರಲ್ಲಿ, ಇಲ್ಲವೇ ಎಲ್ಲೋ ಕೆಲವರು ಅದೃಷ್ಟವಂತರಾಗಿದ್ದಲ್ಲಿ, ಗಟ್ಟಿ ಎದೆಯ ಧೈರ್ಯಶಾಲಿ ಗಳಾಗಿದ್ದಲ್ಲಿ, ಇಲ್ಲವೇ ಪ್ರೋತ್ಸಾಹಿಸುವ ಪೋಷಕರಿದ್ದರೆ ಮಾತ್ರ ವಿಚಿತ್ರ ಕನಸುಗಳು ನನಸಾಗುವುದು ಸಾಧ್ಯವೇನೋ.


    ಬಹುತೇಕ ಹೆಣ್ಣು ಮಕ್ಕಳಿಗೆ ಸಮಾಜ ನಿರ್ಮಿಸಿರುವ ಚೌಕಟ್ಟಿನೊಳಗೆ,ಆರಾಮದಾಯಕ ಕ್ಷೇತ್ರಗಳಲ್ಲೇ ತಮ್ಮ ತಮ್ಮ ಜೀವನ ರೂಪಿಸಿಕೊಳ್ಳುವ ಸಲಹೆ ಸೂಚನೆಗಳು ಸಿಗುವುದೇ ಹೆಚ್ಚು.ಅದರಾಚೆ ಯೋಚಿಸಿದರೆ ಕೆಲವು "ಅದು ಹೆಂಗಸರಿಗೆ ಸಾಧ್ಯವಿಲ್ಲ,ಅವರಿಂದಾಗದು"ಎಂದಾದರೆ, ಹಲವು ನಗೆಪಾಟಲಿಗೆ ಒಳಗಾಗುವ ವಿಷಯಗಳೇ.

ಎಲ್ಲೋ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಹೊರತಾದ ಉದಾಹರಣೆಗಳು ಸಿಗಬಹುದೇನೋ.


           ಅನಿವಾರ್ಯವಾಗಿ ಬೇರೆ ದಾರಿ ಕಾಣದೆ ಜೀವನೋಪಾಯಕ್ಕಾಗಿ ಕೆಲವು ಹೆಂಗಸರು ಗಂಡಸರು ಮಾಡುವ ವೃತ್ತಿಗಳನ್ನು,ಉದಾಹರಣೆಗೆ,ಆಟೋ ಡ್ರೈವರ್, ಬಸ್, ಟ್ರೈನ್ ಡ್ರೈವರ್ ಗಳಂತಹ ಕೆಲಸ ಕೈಗೊಂಡಿರುವ ಉದಾಹರಣೆಗಳಿವೆ,ಆದರೆ ಅದೇ ವೃತ್ತಿ ಕೈಗೊಂಡು ಮಾಡುತ್ತೇನೆ ಅನ್ನುವ ಮನೋಭಾವ ಹೆಂಗಸರಲ್ಲಿಯೇ ಬರುವುದು ಅಪರೂಪದಲ್ಲಿ ಅಪರೂಪವೇ.ಅದನ್ನು ಸಹಜವಾಗಿ ಯಾರೂ ತೆಗೆದುಕೊಳ್ಳುವುದಿಲ್ಲ.ಯಾರಾದರೂ ಹುಡುಗಿ ಪೈಲಟ್ ಆದರೆ ಇಲ್ಲವೇ ಸೈನ್ಯ ಸೇರಿದರೆ ಅದು ದೊಡ್ಡ ಸಾಧನೆ ಎಂದು ಬಿಂಬಿಸುವುದುದಕ್ಕಿಂತ ಸಹಜವಾಗಿ ಯಾಕೆ ತೆಗೆದುಕೊಳ್ಳಬಾರದು.


ಎಲ್ಲಾ ರೀತಿಯ ವಿದ್ಯಾಭ್ಯಾಸದ ಕೋರ್ಸ್ ಗಳು,ವೃತ್ತಿ ಪರ ತರಬೇತಿಗಳು,ಉದ್ಯೋಗಗಳು ಎಲ್ಲರಿಗೂ ಸಮಾನ ಅನ್ನುವ ಮನೋಭಾವ ಸಹಜವಾಗಿ ಮಕ್ಕಳಲ್ಲಿ ಯಾಕೆ ಬೆಳೆಸಬಾರದು.?


ಆ ಸಮಾನತೆಯ ಸಮಾಜ ನಿರ್ಮಾಣ ಬಹುಶಃ ಸಧ್ಯಕ್ಕಂತೂ ಸಾಧ್ಯವಿಲ್ಲ. ಅಲ್ಲಿಯವರೆಗೆ ಇರುವ ಕನಸುಗಳ, ಆಸೆಗಳ ಅದುಮಿ. ಇಟ್ಟುಕೊಳ್ಳಲಾದೀತೇ.

ಅವುಗಳಿಗೆ ಪರ್ಯಾಯವಾಗಿ ಬೇರೆ ಹವ್ಯಾಸಗಳ ಬೆಳೆಸಿಕೊಂಡು ಖುಷಿ ಪಡುವವರು ಇದ್ದಾರೆ.ಬುಲ್ಲೆಟ್ ಓಡಿಸಲಾಗದಿದ್ದರೂ ಸ್ಕೂಟಿ,ಕಾರ್ ಓಡಿಸುವುmದು ಕಲಿತು ಓಡಾಡುವುದು ಇದ್ದೇ ಇದೆ. ಪುಕುವೋಕಾನ ತೋಟ ನನ್ನ ಮನೆಯ ಬಾಲ್ಕನಿಯ ಕುಂಡಗಳಲ್ಲಿ ಅರಳುತ್ತಿದೆ.ನಾನಂತೂ ಕುಂಡದಲ್ಲಿ ಇರುವ ಗಿಡಗಳ ಜೊತೆಗೆ ಬೇರೆ ಯಾವ ಗಿಡ ಹುಟ್ಟಿದರೂ ಅದ ಕೀಳಲಾರೆ.ಗಿಡಗಳಿಗೆ ರೋಗ ,ಕೀಟ ಬಾಧೆ ತಗುಲಿದರೆ ಯಾವ ಕೀಟನಾಶಕಗಳ ಕೂಡ ಬಳಸುವುದಿಲ್ಲ.ಗಿಡ ಗಟ್ಟಿಯಾಗಿದ್ದರೆ ತಾನೇ ಬದುಕುತ್ತದೆ ಇಲ್ಲದೇ ಹೋದರೆ ಇನ್ನೊಂದು ಗಿಡಕ್ಕೆ ದಾರಿ ಮಾಡಿಕೊಟ್ಟು ಮಣ್ಣು ಸೇರುತ್ತದೆ. ಈ ರೀತಿ ವರುಷಗಟ್ಟಲೆ ಕುಂಡದ ಸೀಮಿತ ಮಣ್ಣು,ಬಾಲ್ಕನಿಯ ಕೊಂಚ ಬೆಳಕಿನಲ್ಲಿ ಬೆಳೆದು ಗಟ್ಟಿಯಾಗಿರುವ ನನ್ನ ಹೂ ಗಿಡಗಳು ಹೂವರಳಿಸಿ ನಗುವಾಗ,ಯಾವುದಕ್ಕೂ ಜಗ್ಗದ ಪ್ರಕೃತಿಯ ಅದಮ್ಯ ಚೇತನದ ತುಣುಕೊಂದು ನನ್ನ 'ಫುಕುವೋಕ ತೋಟ'ದ ಆಸೆಯನ್ನು ಜೀವಂತ ವಾಗಿರಿಸಿರುವಂತೆ ಅನ್ನಿಸುತ್ತದೆ.


ಕನಸು ಕಾಣುವುದು ,ಆಸೆ ಪಡುವುದು ನನಸಾಗಲೆ ಬೇಕು ಅಂತ ಏನೂ ಅಲ್ಲವಷ್ಟೇ.ಬದುಕಿನ ಕಠಿಣ ಕತ್ತಲ ದಾರಿಗಳ ಸವೆಸುವಾಗ ಹಗಲು ಗನಸುಗಳ ದಾರಿ ದೀಪ ವಿದ್ದರೆ ಗಮ್ಯ ಸುಲಭವಾಗಿ ಸಿಗುವುದೇನೋ.ಆಸೆಯೆಂಬ ಚಾಲನಾಬಲ ಇಲ್ಲದೇ ಹೋಗಿದಿದ್ದರೆ ಬದುಕಿನ ಬಂಡಿ ಎಳೆಯುವುದೆಂತು?ತನ್ನ ಮುಂದೆ ತೂಗುಬಿಟ್ಟ ಕ್ಯಾರಟ್ ನ ಆಸೆಗೆ ಹೇಸರಗತ್ತೆ ಯೊಂದು ಮುಂದೆ ಮುಂದೆ ಸಾಗುವಂತೆ,ಬಣ್ಣದ ಕನಸುಗಳ ಹಿಂಬಾಲಿಸಿ ಜೀವನ ಯಾತ್ರೆ ಸಾಗುತ್ತಿದೆ.

 

 


ಶನಿವಾರ, ಅಕ್ಟೋಬರ್ 17, 2020

ಹಸಿ ಮಣ್ಣ ಧ್ಯಾನದ ಅನುವಾದ

 ಅನುವಾದ ಸಂಗಾತಿ https://sangaati.com/?p=13183

ಕನ್ನಡ ಮೂಲ: ಸ್ಮಿತಾ ಅಮೃತರಾಜ್


ಇಂಗ್ಲೀಷಿಗೆ: ಸಮತಾ ಆರ್.


ಹಸಿ ಮಣ್ಣ ಧ್ಯಾನ.


ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂ

ದುರ್ಬೀನು ಧರಿಸಿ ಹಸಿ ಮಣ್ಣ ಅರಸಿ

ಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರು

ಫೌಂಡೇಶನ್ ಕ್ರೀಂ ಹಚ್ಚುವಂತೆ.


ಸಂಕಟ ಸುಲಭಕ್ಕೆ ದಕ್ಕುವ ಸಂಗತಿಯಲ್ಲವೀಗ.

ಹಾರ ಬಯಸುವ ದೂಳ ಕಣಕಣದ ಚಡಪಡಿಕೆಗೆ

ಎಷ್ಟು ಚಂದದ ಮಿರುಗು ಬಣ್ಣದ ಲೇಪ.


ಏದುಸಿರು ಬಿಡುವಾಗ ಬಿರುಬಿಸಿಲಿನಲ್ಲಿ ರೂಪಾಂತರಗೊಂಡ ಪ್ರಾಣವಾಯು

ಹೇಳಿಕೊಡಲಾಗುತ್ತಿದೆ ಇಲ್ಲೀಗ ಎಳೆಯರಿಗೆ

ಚಿತ್ರಕ್ಕೆ ಬಣ್ಣ ತುಂಬುವ ಪಾಠ

ಫ್ಯಾನಿನ ಅಡಿಯಲ್ಲಿ ಕುಳ್ಳಿರಿಸಿ.


ತಲೆಯೆತ್ತಿದೆ ವಿಶಾಲ ಸಭಾಂಗಣ

ತೇವದ ಗುರುತೇ ಸಿಗದಂತೆ,

ಕೆರೆಯ ಸಮಾಧಿಯ ಮೇಲೆ.

ನಡೆಸುತ್ತಿದ್ದಾರೆ ಹಿರಿಯರು

ಶುಷ್ಕ ಸಮಾಲೋಚನೆ ಒಳಗೆ.


ಮೋಡ ಬಿತ್ತನೆ, ನದಿ ತಿರುವು

ಗಹನ ಚರ್ಚೆಯ ಕಾವು

ಎಸಿಯ ಒಳಗೂ ಸುರಿವ ಬೆವರು

ಸೈ ಎನ್ನಲಾಗದ ತೀರ್ಮಾನಕ್ಕೆ

ಮುಂದೂಡಲಾಗಿದೆ ಸಭೆ ನಾಳೆಗೂ.


ಎಲ್ಲಿಂದಲೋ ತೂರಿಬಂದ ಹಿಡಿ ಬೀಜವೀಗ

ಕಾದ ಟಾರು ರಸ್ತೆಯ ಮೇಲೆ ಬಿದ್ದು

ಪಟಪಟನೆ ಸಿಡಿದೇಳುತ್ತಿವೆ

ತಾಳ್ಮೆಗೆಟ್ಟು.


ಸಾವಿಗೆ ಸೆಡ್ಡುಹೊಡೆದ ದೈತ್ಯ ಮಹಲುಗಳು

ದಿಟ್ಟಿಸುವಾಗ ಬಿಡುಗಣ್ಣಿನಿಂದ

ನಾನಿಲ್ಲಿ ಧ್ಯಾನಿಸುತ್ತಿರುವೆ

ತೊಂಡೆ, ಬೆಂಡೆ ,ಬಸಳೆ

ಬೇರು ಸೋಕುವ ಹಸಿ ಮಣ್ಣ.


ನಾನೀಗ ಉಮೇದಿಗೆ ಬಿದ್ದಿದ್ದೇನೆ

ಹಸಿಮಣ್ಣು ಹಂಚುವುದಕ್ಕಾಗಿ

ಇಲ್ಲಿಯ ಮಣ್ಣು ಅಲ್ಲಿಯ ಸಸಿ

ಬೇರಿಳಿಸಿ ಬಿಟ್ಟ ಉಸಿರು..


ಪವಡಿಸಲಿ ಜಗದ ಜಗುಲಿಯಲ್ಲಿ

ಪ್ರಭುವೇ.


—-


A yearning for some wet soil.


Holding the binoculars,

Everyone is competing hard,

To search for a fistful of wet soil.


Worshipping the spade

Work is inaugurated,

As a foundation cream

Roads are smeared with coal tar.


Pain is not easily empathised now,

How nice to overlay

These fidgeting dust particles,

Who want to fly away,

with glistening hues.


The breath gets transformed

While gasping for air in the hot sun.

Here kids are taught to fill colours to the sketches ,sitting under a fan.



.

A capacious auditorium is erected

Without the traces of any moisture

On the grave of a vast lake.

Leaders are busy inside

With their dry speeches.


Deep discussions on

“Cloud seeding,linking rivers”

Are heating up the air,

Sweating even inside an ac room,

When Conclusions are hard to find

The meeting is carried over

Day after day..


A handful of seeds came flying

From nowhere and fell on the

Hot tar road,and unable to bear

Exploding aloud.


When the immortal giant mansions

Are staring with eyes wide open,

I am yearning for some fresh wet soil

To root my greens,gourds and creepers.


One of my apartment friends

Called me up for

An urgent supply of

Some fresh wet soil,

For a potted Tulasi plant.


Now I am all eager

To distribute the wet soil.

Soil from here ,will root deep

The plant over there

and let the breath out..


And let the Lord rest

On the stage of the world.


*******************************




ಮಂಗಳವಾರ, ಅಕ್ಟೋಬರ್ 6, 2020

*ನಾಳೆ ಅಡುಗೆ ಏನು ಮಾಡುವುದು?

 *NEWSICS.COM SUNDAY SPECIAL*

04-10-2020 


*ಭಾವಲಹರಿ*


*ನಾಳೆ ಅಡುಗೆ ಏನು ಮಾಡುವುದು?!*




ನಾಳೆ ಅಡುಗೆ ಏನು ಮಾಡುವುದು?!


ಅಕ್ಕ ,ತಂಗಿ , ಇಬ್ಬರೂ ಬೇಸಿಗೆ ರಜೆಗೆಂದು ತಮ್ಮ ಮಕ್ಕಳ ಸೈನ್ಯವನ್ನು ಹೊರಡಿಸಿಕೊಂಡು ತಮ್ಮ ತವರು ಮನೆಗೆ ಬಂದು ಝಂಡಾ ಊರಿದ್ದರು. ತವರಿನಲ್ಲಿ ಗಂಡು ಮಕ್ಕಳಿಂದ ಬೇರೆಯಾಗಿ,ಆಸ್ತಿಯಲ್ಲಿ ತನ್ನ ಜೀವನ ನಿರ್ವಹಣೆಗೆ ಅಂತ ಸ್ವಲ್ಪ ಭಾಗ ತೆಗೆದುಕೊಂಡು, ಮನೆಯಲ್ಲೂ ಒಂದು ಭಾಗವನ್ನು ಬಿಡಿಸಿಕೊಂಡು ವಾಸಿಸುತ್ತಿದ್ದ ಅವ್ವನ ಜೊತೆಗೇ ಬೇಸಿಗೆ ರಜೆ ಕಳೆಯುವ ಸಂಭ್ರಮ.


ರಜೆ ಮಕ್ಕಳಿಗೆ ಮಾತ್ರ ,ತಾಯಂದಿರಿಗೆ ಯಥಾ ಪ್ರಕಾರ ಇಲ್ಲೂ ಅದೇ ಬೇಯಿಸು, ತಿನ್ನಿಸು, ತೊಳಿ ,ಬಳಿಯುವ ಕೆಲಸಗಳೇ.ಅದಲ್ಲದೆ ನಗರದ ತಮ್ಮ ಮನೆಯಲ್ಲಿ ಇದ್ದ ಗ್ಯಾಸ್ ಒಲೆ, ಮಿಕ್ಸಿ, ಕುಕ್ಕರ್ ಸೌಕರ್ಯಗಳ ಸುಖ ಇಲ್ಲಿ ಹಳ್ಳಿಯ ಅವ್ವನ ಮನೆಯಲ್ಲಿ ಇಲ್ಲದೆ, ಸೌದೆ ಒಲೆ, ಒಳಕಲ್ಲು ಬಳಸ ಬೇಕಾಗಿ ಬಂದರೂ ಅದೇ ಇನ್ನೊಂದು ತರಹದ ಸುಖ.


ಅಕ್ಕ ತಂಗಿ ದಿನಾ ಅವ್ವನೊಂದಿಗೆ ಹರಟುತ್ತಾ, ಅಡಿಗೆ ಮಾಡುತ್ತಾ, ಬಿಡುವು ಸಿಕ್ಕಾಗ ನೆಂಟರ ಮನೆ ಸುತ್ತುತ್ತಾ, ಮಕ್ಕಳನ್ನು ಅವರ ಪಾಡಿಗೆ ಅವರನ್ನು ತೋಟ ಗದ್ದೆ ಸುತ್ತಲು ಬಿಟ್ಟು, ತಮ್ಮದೇ ಆದ ರಜೆಯ ಸಡಗರ ಅವರಿಗೆ. ಮಾತು ಆಡಿದಷ್ಟೂ ಮುಗಿಯದು, ಬಟ್ಟೆ ಒಗೆಯುವಾಗ,ಪಾತ್ರೆ ತೊಳೆಯುವಾಗಾ,ತೋಟದ ಬಾವಿಯಿಂದ ಮನೆಗೆ ನೀರು ಹೊರುವಾಗ, ಯಾವಾಗ ನೋಡಿದರೂ ಮಾತೇ.


"ಮಾತಾಡಿ ಆಡಿ ಆ ಹಾಳು ಬಾಯಿಗೆ ನೋವಾದರೂ ಬರೋದಿಲ್ವ" ಅಂತ ಅವರವ್ವ ಆಡಿಕೊಂಡು ನಗಾಡಿದರೂ ಇವರ ಮಾತು ನಿಲ್ಲುತ್ತಿದ್ದದ್ದು ರಾತ್ರಿ ಉಂಡು ಮಲಗಿದಾಗಲೆ.


                ಹೀಗಿದ್ದಾಗಲೇ ಒಂದು ದಿನ ಸಂಜೆ ಇಬ್ಬರೂ ಮಾರನೇ ದಿನದ ಬೆಳಗಿನ ತಿಂಡಿಗೆ ದೋಸೆಗೆ ಅಂತ ನೆನೆಸಿದ್ದ ಅಕ್ಕಿ ,ಉದ್ದು ರುಬ್ಬಲು ಕೂತರು. ಅಕ್ಕ ಗುಂಡುಕಲ್ಲು ಹಿಡಿದು ಆಡಿಸಿದರೆ ತಂಗಿ ಹಿಟ್ಟು ತಳ್ಳಲು ಕೂತಳು. ಗುಂಡು ತಿರುಗಿದಂತೆ ಇವರ ಮಾತೂ ತಿರುಗಿ ತಿರುಗಿ ಊರೆಲ್ಲ ಸುತ್ತು ಹೊಡೆಯುತ್ತಿತ್ತು. 


ಹಾಗೇ ಮಾತನಾಡುತ್ತ ತಂಗಿಗೆ ಏನೋ ಹೊಳೆದು "ಅಲ್ಲಾ ಕಣಕ್ಕ, ನಾಳೆ ಬೆಳಿಗ್ಗೆ ತಿಂಡಿಗೆ ಎನ್ ಮಾಡೋದು" ಅಂತ ಕೇಳಿದ್ದಕ್ಕೆ, ಅವರಕ್ಕ "ಅಯ್ಯೋ, ಏನೋ ಒಂದು ಮಾಡಿದ್ರಾಯ್ತು ಬುಡೇ, ದಿನಾ ಏನ್ ಬೇಯಿಸೋದು ಅಂತ ಯೋಚ್ನೆ ಮಾಡ್ತಾನೆ ಕಳದೊಯ್ತದೆ," ಅಂತ ನಿಟ್ಟುಸಿರು ಬಿಟ್ಟು ಮತ್ತೆ ಇಬ್ಬರೂ ಹಿಟ್ಟು ರುಬ್ಬೋದು ಮುಂದುವರೆಸಿದರು. 


ಕೇಳುತ್ತಾ ಇದ್ದ ಅವ್ವನಿಗೆ ನಗೆ ತಡೆಯಲಾರದೆ"ಅಲ್ಲಾ ಕಣ್ರೋ, ಈ ಹಿಟ್ಟ ಆಡುಸ್ತ ಇರೋದು ಯಾಕೆ, ನಿಮ್ ಮೈ ಮೇಲೆ ಹುಯ್ಕೊಳ್ಳಕಾ" ಅಂತ ನಗಾಡಿದಾಗ ಅಕ್ಕ ತಂಗಿಯರ ಟ್ಯೂಬ್ ಲೈಟ್ ಝಗ್ ಅಂತ ಹೊತ್ತಿಕೊಂಡಿತು.


ಇದು ನಮ್ಮಮ್ಮ ಹಾಗೂ ಚಿಕ್ಕಮ್ಮ ಯಾವಾಗಲೂ ನೆನೆದು ನಗುತ್ತಿದ್ದ ವಿಷಯ. ಅಂದಿಗೂ ಇಂದಿಗೂ ಎಂದಿಗೂ ಹೆಂಗಳೆಯರ ಎಂದೂ ಬಗೆ ಹರಿಯದ ಯಕ್ಷ ಪ್ರಶ್ನೆ ಎಂದರೆ, " ನಾಳೆ ಅಡುಗೆ ಏನು ಮಾಡೋದು?"


         ಆ ಧರ್ಮರಾಯ ಆ ಯಕ್ಷನ ಪ್ರಶ್ನೆ ಗಳನ್ನೇನೋ ಸುಲಭವಾಗಿ ಉತ್ತರಿಸಿಬಿಟ್ಟ. ಅದರ ಬದಲಿಗೆ ಅವನು ಭೀಮನ ಜಾಗದಲ್ಲಿ ವಿರಾಟರಾಯನ ಅರಮನೆಯಲ್ಲಿ ಅಡುಗೆ ಮಾಡಿದ್ದಿದ್ದರೆ ಗೊತ್ತಾಗುತ್ತಿತ್ತು ನಿಜವಾದ ಜಾಣ ಭೀಮನೋ ಇವನೋ ಅಂತ . ತಮಾಷೆಯೇನೆ ಇರಲಿ,

ಅಂತಹ ಯಕ್ಷ ಪ್ರಶ್ನೆಗಳಿಗಿಂತ ಕಠಿಣ "ಅಡುಗೆ ಏನು ಮಾಡೋದು? " ಅನ್ನೋ ಕಗ್ಗಂಟನ್ನು ಸಾವಿರಾರು ವರ್ಷಗಳಿಂದ ಬಿಡಿಸುತ್ತಾ ಬಂದಿರುವ ನಮ್ಮ ವೀರ ನಾರಿಯರಿಗಿಂತ ಚಾಣಾಕ್ಷರು ಯಾರಿದ್ದಾರೆ?


ಅಡುಗೆ ಮಾಡೋದು ಸುಲಭವೇ ಬಿಡಿ.ಆದರೆ ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸುವುದು, ಮುಂಚಿತವಾಗಿ ಪ್ಲಾನ್ ಮಾಡೋದು, ಅಡುಗೆ ಮನೆಯಲ್ಲಿ ಏನಿದೆ, ಏನಿಲ್ಲ ,ಅಂತ ನೆನಪಿನಲ್ಲಿ ಇಟ್ಟು ಕೊಂಡಿರೋದು, ಇವುಗಳಿಗಿಂತ ತಲೆ ಬಿಸಿ ಇನ್ನೊಂದೆಲ್ಲಿ?ಅದರಲ್ಲೂ ಈರುಳ್ಳಿ,ಟೊಮ್ಯಾಟೋ ಗಳ ಬೆಲೆ ಗಗನಕ್ಕೇರುವ ದಿನಗಳಲ್ಲಿ ತಲೆ ಕೆಟ್ಟು ಗೊಬ್ಬರವಾಗುತ್ತದೆ.ಈರುಳ್ಳಿ ಟೊಮ್ಯಾಟೋಗಳು ನಮ್ಮ ಭಾರತೀಯ ಅಡುಗೆಗಳನ್ನು ಎಷ್ಟರ ಮಟ್ಟಿಗೆ ಆವರಿಸಿ ಕೊಂಡು ಬಿಟ್ಟಿವೆ ಎಂದರೆ,ಅವುಗಳಿರದೆ ಯಾರ ಮನೆಯ ಅಡಿಗೆಯೂ ಪರಿಪೂರ್ಣವಲ್ಲ ಬಿಡಿ.ಬೆಲೆ ಕಮ್ಮಿ ಇದ್ದಾಗ ಕೆಜಿ ಗಟ್ಟಲೆ ಬಳಸಿ,ಹೆಚ್ಚಾದಾಗ ಗ್ರಾಮ್ ಗಳ ಲೆಕ್ಕದಲ್ಲಿ ಬಳಸಿ ರುಚಿಯಲ್ಲಿ ಆಗುವ ವ್ಯತ್ಯಾಸಗಳಿಗೆ ಮಕ್ಕಳನ್ನು ಹೊಂದಿಸುವಷ್ಟರಲ್ಲಿ

ಸಾಕು ಸಾಕಾಗುತ್ತದೆ.


ಅಡುಗೆ ಪ್ಲಾನ್ ಮಾಡುವಾಗ ಏನೋ ಒಂದು ಮಾಡಿದರಾಯಿತು ಅಂತ ಅಂದು ಕೊಳ್ಳಲಿಕ್ಕೆ ಸಾದ್ಯವೇ ಇಲ್ಲ. ಮನೆಯಲ್ಲಿ ಇರೋ ಅಷ್ಟೂ ಜನರ ರುಚಿ ಅಭಿರುಚಿ ಗೊತ್ತಿರಬೇಕು, ಮನೆಯ ಆರ್ಥಿಕ ಸ್ಥಿತಿ ಗೆ ತಕ್ಕಂಥ ಸಾಮಗ್ರಿ ಖರೀದಿಸುವ ಚಾಕ ಚಕ್ಯತೆ ಬೇಕು, ಬೇರೆ ಬೇರೆ ಸಮಯಕ್ಕೆ ಶಾಲೆ ಕಾಲೇಜು ಎಂದು, ಕೆಲಸಕ್ಕೆ ಎಂದು ಹೊರಡುವವರ ಸಮಯಕ್ಕೆ ಸರಿಯಾಗಿ ತಯಾರು ಮಾಡಲು ಸಾಧ್ಯವಾ ಎಂದು ಯೋಚಿಸಬೇಕು. ಇನ್ನು ಶುಗರ್ರು.ಬಿಪಿ,ಗ್ಯಾಸ್ಟ್ರಿಕ್ ಎಂದು ನರಳುವವರು ಮನೆಯಲ್ಲಿ ಇದ್ದರೆ ಅವರಿಗೇನು ಮೆನು ಅಂತ ಬೇರೆ ಪಾಡು ಹತ್ತಬೇಕು.


        ಸರಿ ಅಡುಗೆ ಪ್ಲಾನ್ ಮಾಡಿಯೇನೊ ಆಯಿತು. ಈಗ ಕಾರ್ಯ ರೂಪಕ್ಕೆ ಇಳಿಸುವಾಗ ಅಚಾನಕ್ ಎಂದು ಎದುರಾಗುವ ಕಿತಾಪತಿಗಳ ಕಾಟ ಹೇಳಲಿಕ್ಕಾಗದು.

ನನಗೆ ಎಷ್ಟೊಂದು ಬಾರಿ ವಗ್ಗರಣೆಗೆ ಎಣ್ಣೆ ಕಾಯಲು ಇಟ್ಟಾಗಲೆ ಸಾಸಿವೆ ಖಾಲಿಯಾಗಿದೆ ಅಂತ ಹೊಳೆಯುವುದು. ಈರುಳ್ಳಿ ಹೆಚ್ಚುವಾಗಲೇ ಮುಗಿದುಹೋದ ಹಸಿಮೆಣಸು ಕಣ್ಣಲ್ಲಿ ನೀರು ತರುವುದು. ರಾತ್ರಿ ಒಂಬತ್ತೂವರೆಗೆ ಸಾರಿಗೆ ವಗ್ಗರಣೆ ಹಾಕಿ, ಉಪ್ಪಿನ ಜಾಡಿಗೆ ಕೈ ಹಾಕಿದಾಗ ತೀರಿ ಹೋಗಿರುವ ಉಪ್ಪಿನ ಅಳತೆ ಸಿಗುವುದು.


ನನ್ನ ಗಂಡ ಗೊಣಗುತ್ತಲೇ " ನಿಮ್ಮವ್ವ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಜನ" ಎನ್ನುತ್ತಾ ಹೊತ್ತಲ್ಲದ ಹೊತ್ತಲ್ಲಿ ಅಂಗಡಿಗಳಿಗೆ ಹೋಗಿದ್ದು ಇದೆ.ಎಷ್ಟೋ ಬಾರಿ ಮಾಡಿರೋ ತಯಾರಿ ಫ್ರಿಡ್ಜ್ ನಲ್ಲೇ ಬಾಕಿಯಾಗಿ ಬೇರೆ ಇನ್ನೇನೋ ಮಾಡಿದ್ದೂ ಇದೆ.ಅಡುಗೆ ಎಲ್ಲಾ ಆದ ಬಳಿಕ ಫ್ರಿಡ್ಜ್ ತೆಗೆದಾಗ ಹೆಚ್ಚಿಟ್ಟ ತರಕಾರಿಗಳು ಅಣಕಿಸಿದಾಗಲೆ ನನ್ನ ಬುರುಡೆಗೆ ಆಗಿರುವ ಪ್ರಮಾದದ, ಅರಿವಾಗುವುದು.


ಆದರೆ ಇದೇನು ನನ್ನೊಬ್ಬಳದೆ ಸಮಸ್ಯೆ ಯಲ್ಲ ಬಿಡಿ. ಇಡೀ ಪ್ರಪಂಚದ ಮಹಿಳೆಯರನೆಲ್ಲಾ ಕಾಡುತ್ತಿರುವ ಏಕೈಕ ಪ್ರಶ್ನೆ " ನಾಳೆ.ಅಡುಗೆ ಏನು ಮಾಡುವುದು!?.


        ಇದು ಉದ್ಭವಿಸಲು ಹೊತ್ತು ಗೊತ್ತು ಏನೂ ಬೇಡ.

ಸಂಜೆ ವಾಕ್ ಮಾಡುತ್ತಿರುವ ಗೆಳತಿಯರು, ಬಸ್ನಲ್ಲಿ ಅಕ್ಕ ಪಕ್ಕ ಕುಳಿತು ಹರಟು ತ್ತಿರುವ ಮಹಿಳೆಯರು,ಸಿನೆಮಾ ಪಾರ್ಕ್ ಅಂತ ಸುತ್ತಲು ಹೋಗಿರುವ ಸ್ನೇಹಿತೆಯರು, ಕೆಲಸದ ಬಿಡುವಿನಲ್ಲಿ ಸ್ಟಾಫ್ ರೂಂ ನಲ್ಲಿ ಕಲೆ ಹಾಕಿಕೊಂಡಿರುವ ಮಹಿಳಾ ಸಹೋದ್ಯೋಗಿಗಳು, ಮಾರ್ಕೇಟ್ ಗೆ ಒಟ್ಟಿಗೆ ಹೊರಟ ಅಕ್ಕಪಕ್ಕದ ಮನೆಯ ಮಾನಿನಿಯರು,ಇತ್ಯಾದಿ ಹೆಂಗಸರ ಗುಂಪು ಕೂಡಿರುವ ಕಡೆ ಸುಮ್ಮನೆ ಕಿವಿಗೊಡಿ."ಇವತ್ತು ನಿಮ್ಮನೆ ಏನಡಿಗೆ?" ಇಲ್ಲವೇ "ರಾತ್ರಿ ಊಟಾಕ್ಕೇನು ಮಾಡ್ತೀರಾ?" ಇಂಥ ಪ್ರಶ್ನೆಗಳು ಖಂಡಿತ ಕಿವಿಗೆ ಬಿದ್ದೇ ಬೀಳುತ್ತವೆ.


ಇನ್ನೂ ಕೆಲವು ಬಾರಿ ಎದುರಾಗುವ ವೇಳೆ ,ಸರಿಯಾಗಿ ದಿನದ ರಾತ್ರಿ ಊಟ ಮುಗಿಸಿ,ಪಾತ್ರೆ ಎಲ್ಲ ಮುಚ್ಚಿಟ್ಟು, ಅಡುಗೆ ಮನೆ ಇನ್ನೇನು ದಾಟಬೇಕು ಅನ್ನುವಾಗ.


"ಬಿಡು ಬೆಳಿಗ್ಗೆಗೆ ಉಪ್ಪಿಟ್ಟು ಮಾಡಿದರಾಯಿತು" ಅನ್ನಿಸಿದ ಕ್ಷಣವೇ ಆ ಇಡೀ ವಾರ ಮಾಡಿರುವ ವಗ್ಗರಣೆ ತಿಂಡಿಗಳು ಕಣ್ಣೆದುರು ನಿಲ್ಲುತ್ತವೆ. ಮತ್ತೆ ಮಾರಣೆಗೂ ಅದೇ ಆದರೆ ಮಕ್ಕಳು ಮುಷ್ಕರ ಹೂಡುವ ಭಯ.


ದೋಸೆ ಇಡ್ಲಿ ಗೆ ಪ್ಲಾನ್ ಮಾಡೋಕೆ ಅಕ್ಕಿ ನೆನೆಸಲು ಆಗಲೇ ಲೇಟಾಗಿದೇ. ಇನ್ನು ಮನೆ ಜನಕ್ಕೆಲ್ಲ ಚಪಾತಿ,ರೊಟ್ಟಿ,ಪೂರಿ ಅಂತ ಲಟ್ಟಿಸುತ್ತ ಕೂರಲು ಸಮಯ ಕೆಲಸದ ದಿನಗಳಲ್ಲಿ ಇಲ್ಲವೇ ಇಲ್ಲ.ಅಂಥ ಸಮಯದಲ್ಲಿ ರಾತ್ರಿಯಿಡೀ ನಿದ್ದೆ ಬಂದರೆ ಹೇಳಿ.


             ಮನೆಯಕಡೆಸಾಕಷ್ಟುಅನುಕೂಲವಾಗಿರುವಾ,

ಜೊತೆಗೆ ಅವಳೂ ಒಳ್ಳೆಯ ಉದ್ಯೋಗದಲ್ಲಿರುವ ನನ್ನ ಗೆಳತಿಯೊಬ್ಬಳು ಇದೆಲ್ಲ ತಲೆಹರಟೆಯೇ ಬೇಡವೆಂದು ಮನೆಯಲ್ಲಿ ಅಡುಗೆಯವರೊಬ್ಬರನ್ನು ಇಟ್ಟು ಕೊಂಡು ಬಿಟ್ಟಿದ್ದಾಳೆ.ಮನೆಗೆ ಬೇಕಾದ ಅಡುಗೆ ಸಾಮಗ್ರಿ ,ತರಕಾರಿ ತಂದು ಕೊಟ್ಟು ಬಿಟ್ಟರೆ ಮುಗಿಯಿತು.ಜೊತೆಗೆ ಹದಿನೈದು ದಿನಗಳ ಅವಧಿಯಲ್ಲಿ ಪ್ರತಿದಿನ ಏನು ಅಡಿಗೆ ಮಾಡಬೇಕು ಅನ್ನುವ ಮೆನು ಚಾರ್ಟ್ ಅಡಿಗೆ ಮನೆಯಲ್ಲಿ ತೂಗು ಹಾಕಿ ಬಿಟ್ಟಿದ್ದಾಳೆ.ಪಾಕ್ಷಿಕವಾಗಿ ಈ ಮೆನು ಆವರ್ತ ಗೊಳ್ಳುತ್ತಿರಬೇಕು. ಅಷ್ಟು ಮಾಡಿ ತನ್ನ ಜವಾಬ್ದಾರಿ ಕಳೆದು ಕೊಂಡು ಬಿಟ್ಟಿದ್ದಾಳೆ. ಇನ್ನು ಬಾಕಿ ತಲೆನೋವು ಅಡುಗೆಯವರದು. ಎಷ್ಟು ಸುಲಭ ಪರಿಹಾರ ನೋಡಿ.ಆದರೆ ಅದು ಆರ್ಥಿಕವಾಗಿ ಅನುಕೂಲವಾಗಿರುವವರ ಸುಖ ಸೌಲಭ್ಯ. ಮಧ್ಯಮ ಕೆಳ ಮಧ್ಯಮ ವರ್ಗದವರಿಗೆ ಆ ಸೌಕರ್ಯ ಮಾಡಿಕೊಳ್ಳುವಷ್ಟು ಅನುಕೂಲ ಎಲ್ಲಿರುತ್ತದೆ ಹೇಳಿ.


     ಅವತ್ತು ದುಡಿದು ಅವತ್ತಿನ ಅಡುಗೆಗೆ ಹೊಂದಿಸ ಬೇಕಾಗಿರುವ ಬಡ ಹೆಂಗಸರ ಕಷ್ಟ ಅಷ್ಟಿಷ್ಟಲ್ಲ.ಗಂಡ ಕೂಡ ದುಡಿದು ಮನೆಗೆ ಕೊಟ್ಟರೆ ಪರವಾಗಿಲ್ಲ.ದುಡಿದು ಎಷ್ಟೇ ಸಾಕಾಗಿ ಮನೆಗೆ ಬಂದರೂ ಇರುವುದರಲ್ಲೇ ಹೊಂದಿಸಿ ಗಂಡ ಮಕ್ಕಳ ಹೊಟ್ಟೆ ತುಂಬಿಸುತ್ತಾರೆ. ಕುಡಿದು ಬಂದು ಹೊಡೆದು ಬಡಿದು ಸಂಪಾದನೆಯನ್ನು ಕಳೆಯುವವನಾದರೆ ಏನು ಮಾಡುವುದು.


ಗಂಡಸರಿಗೆ ಈ ತಲೆನೋವು ಇಲ್ಲವೇ ಇಲ್ಲ ಬಿಡಿ.ನನ್ನ ಗಂಡ ಓದುವ ಸಮಯದಲ್ಲಿ,ನಂತರ ಮದುವೆಗೆ ಮುಂಚೆ ಒಬ್ಬರೇ ರೂಂ ಮಾಡಿಕೊಂಡು ಇದ್ದಾಗ ,ಅವರು ಅಡಿಗೆ ಮಾಡಿಕೊಳ್ಳುತ್ತಿದ್ದು,ಅವರ ಮಾತಿನ ಪ್ರಕಾರವೇ

"ನಾನು ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ದಿನ ಬೆಳಿಗ್ಗೆ ತಿಂಡಿ ಹೋಟೆಲ್ ನಲ್ಲಿ,ಮದ್ಯಾಹ್ನ ಸಂಜೆಗೆ ದಿನಾ ಒಂದೇ ಅಡುಗೆ, ಅನ್ನ ಟೊಮ್ಯಾಟೋ ಸಾರು,ಮೊಟ್ಟೆ,ಭಾನುವಾರ ಬಂದರೆ ಒಂದು ಚಿಕನ್ ಗೊಜ್ಜು,ಅಷ್ಟೇ.ನಾನೇನು, ನನ್ನ ಎಷ್ಟೊಂದು ಗೆಳೆಯರೂ ಹಾಗೆ ಇದ್ದಿದ್ದು,ನೀವು ಹೆಂಗಸರಿಗೆ ಬುದ್ಧಿ ಇಲ್ಲ ಅಷ್ಟೇ" ಅಂತ ನಗಾಡುತ್ತಾರೆ.

ಹೇಳೋದೇನೋ ಸುಲಭ ಬಿಡಿ.ಮದುವೆ ನಂತರವೂ ಹೆಂಡತಿ ಅದೇ ರೀತಿಯಾಗಿ ಅಡುಗೆ ಮಾಡಿದರೆ ಈ ಗಂಡಸರು ಒಪ್ಪುವರೇನು! ವೈವಿಧ್ಯವಿಲ್ಲದಿದ್ದರೆ ಬರೀ ಅಡುಗೆಯೇನು, ಜೀವನವೇ ನೀರಸವಲ್ಲವೇ?ಹಾಗಾಗಿ ಹೆಂಗಸರು ಎಷ್ಟು ತಲೆನೋವಾದರೂ ತಮ್ಮ ವರೈಟೀ ವರೈಟಿ ಅಡುಗೆ ಬಿಡಲಾರರು.


ಭಾನುವಾರದ ಬಾಡೂಟ, ಹಬ್ಬ ಹರಿದಿನಗಳಲ್ಲಿ ಆಯಾ ಹಬ್ಬಕ್ಕೆ ತಕ್ಕ ಅಡುಗೆ ಮಾಡುವದಕ್ಕಾಗಿ ಹೊಂದಿಸಬೇಕಾದ ,ಸಾಮಗ್ರಿ ,ಸಮಯ ಎಲ್ಲಾ ಯೋಚಿಸಿ, ಎಲ್ಲವನ್ನೂ ನಮ್ಮ ಹೆಂಗಸರು ಹೇಗೋ ನಿಭಾಯಿಸಿ ಸೈ ಅನ್ನಿಸಿಕೊಂಡು ಬಿಡುತ್ತಾರೆ. ಇಷ್ಟೆಲ್ಲಾ ಶೇಕಡಾ ನೂರಕ್ಕೆ ನೂರರಷ್ಟು ದಕ್ಷತೆ, ಕ್ಷಮತೆಯಿಂದ ಕೆಲಸ ಮಾಡುವ ನಮ್ಮ ಸ್ತ್ರೀಯರು ಯಾವ ಬಹುರಾಷ್ಟ್ರೀಯ ಕಂಪನಿಯ ಸಿ ಇ ಓ ಗಿಂತಲೂ ಕಮ್ಮಿ ಇಲ್ಲ ಬಿಡಿ.


ಗೃಹಿಣಿಯರಿಂದ ಹಿಡಿದು ಉದ್ಯೋಗಸ್ಥ ಮಹಿಳೆಯರ ವರೆಗೆ, ಹಳ್ಳಿಯಿಂದ ದಿಲ್ಲಿಯವರೆಗಿನ ಹೆಂಗಳೆಯರಿಗೆ, ಅತ್ತೆ ಸೊಸೆ, ತಾಯಿ ಮಗಳು, ಅಕ್ಕ ತಂಗಿ, ಅತ್ತಿಗೆ ನಾದಿನಿ ಓರಗಿತ್ತಿ, ದೊಡ್ಡಮ್ಮ ಚಿಕ್ಕಮ್ಮ ಯಾರನ್ನೂ ಇದು ಬಿಡದೆ ಕಾಡಿದೆ.


ಈಗೀಗ ಝೋಮ್ಯಟೋ, ಸ್ವಿಗ್ಗಿ, ಪಿಜ್ಜಾ ಡೆಲಿವರಿ ಅಂತೆಲ್ಲ ಇರುವಾಗ ಸ್ವಲ್ಪ ಕೆಲಸ ಸುಲಭವೇ.

ಆದರೆ "ಏನು ಆರ್ಡರ್ ಮಾಡುವುದು " ಅನ್ನುವುದು ಮುಂದಿನ ಯಕ್ಷಪ್ರಶ್ನೆ. ಒಟ್ಟಾರೆ. ಈ ಅಟ್ಟುವ ಉಣ್ಣುವ ಪ್ಲಾನ್ ನ ತಲೆಹರಟೆ ಈ ಯುಗದಲ್ಲಂತೂ ಬಗೆ ಹರಿಯುವುದಿಲ್ಲ ಬಿಡಿ.





- ಸಮತಾ ಆರ್.

https://newsics.com/literature/articles/essay-writing-by-samatha/34078/


*Facebook*

https://www.facebook.com/pg/newsi

ಛೆ ಅನುವಾದ

 ಅನುವಾದ ಛೇ..

ಕನ್ನಡ ಮೂಲ:ದೀಪ್ತಿ ಭದ್ರಾವತಿ.

ಇಂಗ್ಲೀಷಿಗೆ:ಸಮತಾ ಆರ್

Fist, Strength, Anger, Tear, Breeze

ಛೇ

ಪಕ್ಕದ ಕೋಣೆಯಲ್ಲಿಯೇ ಇದ್ದ ಬಾಡಿಗೆದಾರನೊಬ್ಬ
ಹೇಳದೆ ಕೇಳದೆ ರಾತ್ರಿ
ಹೊರಟು ಹೋಗಿದ್ದಾನೆ

ನಾಪತ್ತೆಯಾಗಿದ್ದಾನೆ
ನನ್ನ ಪುಟ್ಟ ಮಗಳ
ಜೀನ್ಸ್ ಪ್ಯಾಂಟನ್ನು ಹರವುವಾಗಲೆಲ್ಲ
ಕೆಂಪು ಕಣ್ಣಿನಲಿ ನೋಡಿ
“ಸರಿಯಿಲ್ಲ ಸರಿಯಿಲ್ಲ”
ಎನ್ನುತ್ತ ದಢಾರನೆ ಬಾಗಿಲು ಹಾಕಿ
ಶತಪಥ ತಿರುಗುತ್ತಿದ್ದವ

ಹಗಲಿರುಳೂ ನಮ್ಮ ಮನೆಯ ಕಡೆಯೇ ದಿಟ್ಟಿಸುತ್ತ
ಬಾಗಿಲಲ್ಲಿ ಕೂತು
ಅವನ ಸಂಕಟ ನೋಡಲಾಗದೆ
” ನಿನಗ್ಯಾಕೊ ನಮ್ಮಗಳ ಉಸಾಬರಿ”
ಎಂದಿದ್ದೆ
ದನಿ ಜೋರಾಯಿತೋ ಏನೋ
ಎದೆಯೊಳಗೆ ಅದೆಷ್ಡು ಮಾತುಗಳಿದ್ದವೊ
ಒಂದನ್ನು ಹೇಳಿಕೊಳ್ಳದೆ
ಮನೆಯ ಗೋಡೆಯ ತುಂಬೆಲ್ಲ
ಮಸಿಯಲ್ಲಿ ಗೀಚಿ ಹೋಗಿದ್ದಾನೆ

ಅದೆಷ್ಟು ಕೋಪವ ಎದೆಯ ಪುಪ್ಪಸದಲಿ
ಅಡಗಿಸಿಕೊಂಡಿದ್ದನೊ
ಮನೆಯ ಹೆಂಚು ಕಿಟಕಿ
ಬಾಗಿಲು
ಎಲ್ಲವನ್ನು ಮುರಿದು ಹಾಕಿದ್ದಾನೆ
ಒತ್ತಿ ಹೋಗಿದ್ದಾನೆ
ಸಾಕಷ್ಡು ಕುರುಹುಗಳ ಸುತ್ತಲು
ಯಾರು ಬಂದರು ತಳ ಊರದಂತೆ

ಛೇ

ಒಂದಿಷ್ಡು ಕಸ ತೆಗೆಸಿ ಚೊಕ್ಕಗೊಳಿಸಿ
ಸುಣ್ಣಬಣ್ಣ ಬಳಿಸಿದರೆ ಯಾರಾದರು ಬಂದು ಉಳಿದುಕೊಂಡಾರು

ಎಲ್ಲಿಯೂ ಮನೆ ಸಿಕ್ಕದಿದ್ದರೆ
ಪಾಪ ಅವನು?

———-

ದೀಪ್ತಿ ಭದ್ರಾವತಿ.

Tchah….

A tenant living next door
has gone away,last night,
All of a sudden
without telling anyone..

Absconding he is,
The one who used to stare angrily,
whenever I went to dry
the jeans of my little daughter,
And used to slam the door
Saying” not okay, not okay “
Pacing to and fro,with unease .

Day and night sitting at his door
used to stare at mine.
Unable to bear his grunt,
Said I “why are you bothered
so much about us”
My voice might have been on a high ,
So much might be hiding
in his chest to say,
Without revealing anything
Gone away scribbling all upon
the wall in charcoal.

Who knows,
How much anger he was hiding,
Inside his rib cage,
He has broken all the roof tiles,
doors and windows of the house.
Has gone away, leaving behind
enough imprints around,
To make sure not to let
anyone to settle down.

Tchah,

If it’s cleaned removing
all the cobwebs,
And painted anew,
Then someone may come
and stay here.

What if the poor fellow
Doesn’t get
any home
any where?

———-

Translated by Samatha.R

*************************************

 https://sangaati.com/?p=12503

ಭಾನುವಾರ, ಸೆಪ್ಟೆಂಬರ್ 27, 2020

ಮುಂಬಯಿ ಅನುವಾದ

 


            ಮುಂಬಯಿ

ಇಲ್ಲಿ ಗುರುತುಗಳಿಲ್ಲ
ಕಾಲಿಗೆ ಘಲ್ ಘಲ್ ಗೆಜ್ಜೆಗಳಿಲ್ಲ
ರಸ್ತೆಯು ಸವೆದರೂ ಮೂಡದ ಹೆಜ್ಜೆ
ಹೃದಯಕ್ಕಾಗದು ಒಜ್ಜೆ.

ಬ್ಯಾಂಡೇಜು ಕಟ್ಟಿದ ಕೈ ನೋಡಿ
"ಏನಾಯಿತೋ ಯಾರು ಕಟ್ಟಿದರೋ"
ಕೂಗಿದೆ.ಪಕ್ಕದ ಮನೆಯತ್ತ
ಕೈ ತೋರಿಸಿ"ಆಂಟಿ"ಎಂದ ಪುಟ್ಟ ಮಗ.
ಅವಳೇನೋ ಬೆಳಿಗ್ಗೆ "ಹಲೋ" ಎಂದರೆ
ನಗಲೂ ಪುರಸೊತ್ತಿಲ್ಲದೆ ಕೆಲಸಕ್ಕೆ
ಓಡಿ ಹೋಗುವವಳು.

ಮರ್ಸಿಡಿಸ್ಸಲ್ಲಿ ಕ್ಷಣಾರ್ಧದಲ್ಲಿ ಮಾಯ
ವಾಗುವ ಹಾರು ಕೂದಲಿನ ಬೆಡಗಿ,
ಕಚರ ರಾಶಿಯಲ್ಲಿ ಕುರುಕಲು ತಿಂಡಿ
ಹುಡುಕುವ ಝೋಪಡಿ ಹುಡುಗ,
ಮುದುಕನ ಕೈ ಹಿಡಿದು ರಸ್ತೆ ದಾಟಿಸಿ
ಥ್ಯಾಂಕ್ಸ್ ಗಾಗು ಕಾಯದೆ ಮಾಯವಾಗುವ
ಹೆಸರಿಲ್ಲದ ತರುಣ.
ಬಸ್ ಟ್ರೈನ್ ಗಳಲ್ಲಿ ಜೋತು ಬೀಳುವ
ಕೋಟಿ ಜೀವಗಳು....
ಯಾರಿಗೂ ತ್ರಿವಿಕ್ರಮ ನಾಗಿ ಬೆಳೆದು
ಉಳಿದವರನ್ನು ಕಾಲಡಿ
ದಬ್ಬುವ ಬಯಕೆಯಿಲ್ಲ.

ಉಸಿರುಗಳಿಗೆ ಪ್ರಾಣವಾಯು
ಸಮುದ್ರ ಹಾಕುತ್ತಿದೆ ಗಾಳಿ.
ಹರಿಯುವ ಜನಪ್ರವಾಹ ಬಿರಿದು
ನನಗೂ ನಿನಗೂ ದಾರಿ.

ಧರಿಸಬೇಕೆಂದರೂ ಮಾರುಕಟ್ಟೆಯಲ್ಲಿ
ಮುಖವಾಡಗಳು ಮಾರಾಟಕ್ಕಿಲ್ಲ.
ನಮ್ಮ ನೆರಳು ಕೂಡ
ನಮ್ಮನ್ನು ಹಿಂಬಾಲಿಸುತ್ತಿಲ್ಲಾ.


                            MUMBAI...
No  identities  here,
No clinking anklets in the feet,
Though road is treaded
No foot prints are left.
And  the heart is not laden with any load.

Shocked to see the bandaged hand
Screamed at my  little boy,
Asking for  what happened
And who  dressed it.
Pointing to the next door
Said he " aunty".
But she is the one
who is always on a run,
And doesn't have time 
even to smile,
For a morning Hello.

A beauty with  the flowing hair
disappearing in a flash in a Mercedes,
A slumboy searching for
some snacks in the garbage,
A  nameless young man who
helping an old man to cross the road,
Doesn't wait  even for a 'thank you'
And disappears,
Millions of souls hanging in
the bus and the train,
None wants to grow to be a Titan
And crush the rest under the feet.

The sea is blowing a breath of fresh air,
The flood of people is parting away
To make way for you and me.

Even if you want to wear one,
Masks are not on sale in the market,
And even our shadow doesn't follow us.

ಕಣ್ಣ ಕಸ ಅನುವಾದ

 ಈ ಕಸ ಹೇಗೆ 

ಬಿತ್ತೋ ಗೊತ್ತಿಲ್ಲ

ಕಣ್ಣಿಂದ ಇಳಿವ 

ಒಂದೊಂದೇ ಹನಿಗಾಗಿ

ಕಾಯುತಿರುವೆ

ಕರವಸ್ತ್ರದ ತುದಿ

ಸೆರಗಿನ ಚುಂಗು

ಉಫ್..ಅಂತ

ಊದಿದ ಮಗಳ ಉಸಿರು

ಯಾವುದಕ್ಕೂ ಸಿಗದೆ

ಅವಿತು ಕಾಡಿಸುತಿದೆ


ತುಂಬಿದ ಕಣ್ಣುಗಳಲ್ಲಿ

ಜಗತ್ತನ್ನು  ನೋಡುವುದೂ 

ಒಂದು ಅನುಭವ ತಾನೇ

ಹೀಗಂದುಕೊಳ್ಳುತ್ತಲೇ

ಕನ್ನಡಿಯ ಮುಂದೆ ಬಂದು

ಮನಸ ಓಲೈಸಲು 

ಹೆಣಗುತಿರುವೆ


ಈ ನಶ್ವರ ಬದುಕಲ್ಲಿ

ಪ್ರತಿ ಘಳಿಗೆಯನಿರಿಯುತಿದೆ

ಕಣ್ಣ ತುಂಬ ಬಾವು

ಕಣ್ಣೊಳಗೆ ಬಿದ್ದ ನೋವು

                                                       ಶೈಲಜಾ.ಬಿ


A speck of dust.


I just don't know

How this speck of dust

Got in to the eye

And haunting me hiding inside.

And  kept me waiting for

 every drop dripping.


Corner of a hand kerchief

Edge of my saree,

"Uff" the air blown by my kid,

Nothing could get rid of this.


 

To see the world with  filled eyes,

Is  also an experience,

Thinking so,

Stood before the mirror

Struggling hard to console the soul.


In this mortal life,

Eye swelled and the pain filled

Are stabbing each moment.






ಗುರುವಾರ, ಸೆಪ್ಟೆಂಬರ್ 17, 2020

ತರಗೆಲೆ ಅನುವಾದ

 ತರಗೆಲೆ https://sangaati.com/?p=11795

ಅನುವಾದ

ತರಗೆಲೆ

Brown dry leaf on a white background. With shadow stock photography

ಕನ್ನಡ ಮೂಲ: ನಾಗರೇಖಾ ಗಾಂವಕರ್

ಇಂಗ್ಲೀಷಿಗೆ: ಸಮತಾ ಆರ್.

ತರಗೆಲೆ

ಮರದಡಿಯ ನೆರಳಲ್ಲಿ ಬೆಚ್ಚಗೆ ಇತ್ತು ತರಗೆಲೆ.
ಕಾಲಾಂತರದ ಕರಿಯಪ್ಪುಗೆಯಲ್ಲಿ ಮುಂದೊಂದು ದಿನ ಹಾಗೇ
ಕೊಳೆತು ಹೋಗುವುದಿತ್ತು
ಮರಳಿ ಮಣ್ಣಡಿ ಸೇರಿ.

ದಿಗ್ಗನೇ ಬೆಳಗಿದ ನಾಜೂಕು
ಬೆಳಕಿನ ಹೊಳಪು
ಅದೇಕೋ ಅರಿವ ಹೊಸೆವ ಅನಂತದ ನೆರಳಡಿ
ತಂದು ನಿಲ್ಲಿಸಿತು.
ತರಗೆಲೆಯ ಮಾಸಿದ ಬಣ್ಣಕ್ಕೆ ಹೊಂಬಣ್ಣದ ಹೊಳಪು.
ಮತ್ತೆ ಚಿಗುರಿದಂತೆ ಸಂಭ್ರಮ.
ನೆಲದ ನಿಯಮದ ಹಾಗೇ.
ಮಬ್ಬು ಸರಿಸಿ ‘ ಕಾಣ
ಬಯಸಿದ್ದ ಮನಗಾಣು’ ಎಂದು ಎದೆ ತೆರೆದು ಆಹ್ವಾನಿಸಿ
ಅಪ್ಪಿ ಮುದ್ದಿಸಿತು ಬೆಳಕು.

ಬೆಳಕಿನ ದಾರಿಯಲ್ಲಿ ಕಣ್ಢಿಗೆಣ್ಣೆ
ಬಿಟ್ಪು ಹಾಗೇ ನೋಡುತ್ತಲೇ
ಇತ್ತು ತರಗೆಲೆ

ತಪದಂತೆ ಸೈರಿಸಿ ಬೆಳಕ ಕಿರಣ
ಹೊಳಪುಂಡು ಶಕ್ತ ನಿಲುವಲಿ
ನಿರಾಳ ಉಸಿರಾಡುತ್ತ
ಕಾಯುತ್ತಲೇ ಇತ್ತು.

ಪ್ರತಿಮಿಸುವ ಪ್ರತಿ ಪದವೂ
ಒಳಗಣ್ಣ ತೆರೆಸಿ, ವಿಸ್ಮಯದ ಅಂಚು ಎಲೆಯ ಸುತ್ತುಗಟ್ಟಿ
ತಾರೀಪುಗಳ ಹೊತ್ತ ಎಲೆಯ ಭಿತ್ತಿಯ
ಮೇಲೆ ನೂರಾರು ಚಿತ್ರಗಳ ಚಲನೆ, ಚಿಂತನೆ,
ನಿಂದನೆಯ ಎಣ್ಣೆಯಲ್ಲಿ ಹುರಿದು,
ಕಮಟು ವಾಸನೆ ಬಡಿಸಿ, ಮತ್ತೆ ಮರುಗಳಿಗೆ ತುಪ್ಪ ಮೂಗಿಗೆ ಸವರಿ,
ಬೆಳಕು ಹದವರಿತು ತರಗೆಲೆಯ
ನುಡಿಸಿತ್ತು.

ಉರಿವ ಬೆಳಕಿಂದ
ಜಿಗಿಯಬಲ್ಲ ಬೆಂಕಿಯ ತಾಪದ
ಭಯ
ಕಾಡುತ್ತಲೇ ಇತ್ತು.

ಆದರೂ ತರಗೆಲೆಗೆ ತೀರದ
ವ್ಯಾಮೋಹ.
ಹಾರುವ ಪುಟ್ಟ ಗುಬ್ಬಿಯ ಬಾಯೇರಿ, ಅದಿಟ್ಟ ಮೊಟ್ಟೆಯ ಗೂಡಿಗೆ ಮಂದರಿಯಾಗಿ
ಪುಟಪುಟ ನೆಗೆತದ ಚೀಂವ್ ಚೀಂವ್ ಮರಿಗುಬ್ಬಿಗಳ
ಕಾಲಡಿಗೆ ರೋಮಾಂಚನಗೊಳ್ಳಬೇಕು
ಚಿಲಿಪಿಲಿಯೂದುವ ತೊದಲ ನುಡಿಗಳಿಗೆ ಕಿವಿಯಾಗಬೇಕು.

ಜೀವವಿಲ್ಲದ ಒಣ ಎಲೆಯೆಂದವರ ಕಡೆಗೊಮ್ಮೆ
ನಲ್ಮೆಯ ನೋಟವೆಸಗಬೇಕು.

———————
ನಾಗರೇಖಾ ಗಾಂವಕರ.

A dry leaf..

A dry leaf resting cosily,
Under the shadow of a tree,
Was about to get degraded
In the dark embrace of time
And get mixed up with the soil as usual.

Just then all of a sudden a soft tender light
Lit up everything with its gleam.

And without any reason
Brought under the shade of
Infinite enlightenment..

The faded leaf got a new shine
And beaming as if budding anew
Just as the laws of the earth.

Removing the darkness said the light
“Perceive whatever you wanted to see “
Inviting with open arms and cuddling.

With the eyes wide open
The leaf kept on seeing
The path of light.

Bearing the light just as a penance
Devouring the light
Stood strong and breathing.
And kept on waiting..

Every word casted ,
Opened the inner eye
A mesmerizing rim
Surrounded the leaf,
Hundreds of pictures and thoughts
Are moving all over the lamina
laden with the praises.

Fried with the oil of accusations
Made to smell rancid,but
Later buttering up to console,
The light has made the leaf to say
With the right temper.

But the leaf still fears
The heat of the fire
that may emerge
From the glowing light.

But still this leaf has
An unending yearning.
Wants to fly away held in
The beak of a little sparrow,
Wants to be a quilt for it’s eggs filled nest.
Wants to be thrilled under the tripping feet
Of the tweeting nestlings.
Wants to be all ears for their
Stammering chirpings.

And wants to stare with love,
All those,who called it
“A lifeless dry leaf,”

—————————————-

Translated by Samatha.R

ಉಪ್ಪಿನ ಕಾಯಿಗೆ ಒಂಚೂರು ಅನ್ನ...ಸುರಹೊನ್ನೆ

 ಉಪ್ಪಿನ ಕಾಯಿಗೆ ಒಂಚೂರು ಅನ್ನ..   "ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ"ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆ ಯೇ ದೇವರ ಮನೆಯ...