ಭಾನುವಾರ, ಸೆಪ್ಟೆಂಬರ್ 27, 2020

ಮುಂಬಯಿ ಅನುವಾದ

 


            ಮುಂಬಯಿ

ಇಲ್ಲಿ ಗುರುತುಗಳಿಲ್ಲ
ಕಾಲಿಗೆ ಘಲ್ ಘಲ್ ಗೆಜ್ಜೆಗಳಿಲ್ಲ
ರಸ್ತೆಯು ಸವೆದರೂ ಮೂಡದ ಹೆಜ್ಜೆ
ಹೃದಯಕ್ಕಾಗದು ಒಜ್ಜೆ.

ಬ್ಯಾಂಡೇಜು ಕಟ್ಟಿದ ಕೈ ನೋಡಿ
"ಏನಾಯಿತೋ ಯಾರು ಕಟ್ಟಿದರೋ"
ಕೂಗಿದೆ.ಪಕ್ಕದ ಮನೆಯತ್ತ
ಕೈ ತೋರಿಸಿ"ಆಂಟಿ"ಎಂದ ಪುಟ್ಟ ಮಗ.
ಅವಳೇನೋ ಬೆಳಿಗ್ಗೆ "ಹಲೋ" ಎಂದರೆ
ನಗಲೂ ಪುರಸೊತ್ತಿಲ್ಲದೆ ಕೆಲಸಕ್ಕೆ
ಓಡಿ ಹೋಗುವವಳು.

ಮರ್ಸಿಡಿಸ್ಸಲ್ಲಿ ಕ್ಷಣಾರ್ಧದಲ್ಲಿ ಮಾಯ
ವಾಗುವ ಹಾರು ಕೂದಲಿನ ಬೆಡಗಿ,
ಕಚರ ರಾಶಿಯಲ್ಲಿ ಕುರುಕಲು ತಿಂಡಿ
ಹುಡುಕುವ ಝೋಪಡಿ ಹುಡುಗ,
ಮುದುಕನ ಕೈ ಹಿಡಿದು ರಸ್ತೆ ದಾಟಿಸಿ
ಥ್ಯಾಂಕ್ಸ್ ಗಾಗು ಕಾಯದೆ ಮಾಯವಾಗುವ
ಹೆಸರಿಲ್ಲದ ತರುಣ.
ಬಸ್ ಟ್ರೈನ್ ಗಳಲ್ಲಿ ಜೋತು ಬೀಳುವ
ಕೋಟಿ ಜೀವಗಳು....
ಯಾರಿಗೂ ತ್ರಿವಿಕ್ರಮ ನಾಗಿ ಬೆಳೆದು
ಉಳಿದವರನ್ನು ಕಾಲಡಿ
ದಬ್ಬುವ ಬಯಕೆಯಿಲ್ಲ.

ಉಸಿರುಗಳಿಗೆ ಪ್ರಾಣವಾಯು
ಸಮುದ್ರ ಹಾಕುತ್ತಿದೆ ಗಾಳಿ.
ಹರಿಯುವ ಜನಪ್ರವಾಹ ಬಿರಿದು
ನನಗೂ ನಿನಗೂ ದಾರಿ.

ಧರಿಸಬೇಕೆಂದರೂ ಮಾರುಕಟ್ಟೆಯಲ್ಲಿ
ಮುಖವಾಡಗಳು ಮಾರಾಟಕ್ಕಿಲ್ಲ.
ನಮ್ಮ ನೆರಳು ಕೂಡ
ನಮ್ಮನ್ನು ಹಿಂಬಾಲಿಸುತ್ತಿಲ್ಲಾ.


                            MUMBAI...
No  identities  here,
No clinking anklets in the feet,
Though road is treaded
No foot prints are left.
And  the heart is not laden with any load.

Shocked to see the bandaged hand
Screamed at my  little boy,
Asking for  what happened
And who  dressed it.
Pointing to the next door
Said he " aunty".
But she is the one
who is always on a run,
And doesn't have time 
even to smile,
For a morning Hello.

A beauty with  the flowing hair
disappearing in a flash in a Mercedes,
A slumboy searching for
some snacks in the garbage,
A  nameless young man who
helping an old man to cross the road,
Doesn't wait  even for a 'thank you'
And disappears,
Millions of souls hanging in
the bus and the train,
None wants to grow to be a Titan
And crush the rest under the feet.

The sea is blowing a breath of fresh air,
The flood of people is parting away
To make way for you and me.

Even if you want to wear one,
Masks are not on sale in the market,
And even our shadow doesn't follow us.

ಕಣ್ಣ ಕಸ ಅನುವಾದ

 ಈ ಕಸ ಹೇಗೆ 

ಬಿತ್ತೋ ಗೊತ್ತಿಲ್ಲ

ಕಣ್ಣಿಂದ ಇಳಿವ 

ಒಂದೊಂದೇ ಹನಿಗಾಗಿ

ಕಾಯುತಿರುವೆ

ಕರವಸ್ತ್ರದ ತುದಿ

ಸೆರಗಿನ ಚುಂಗು

ಉಫ್..ಅಂತ

ಊದಿದ ಮಗಳ ಉಸಿರು

ಯಾವುದಕ್ಕೂ ಸಿಗದೆ

ಅವಿತು ಕಾಡಿಸುತಿದೆ


ತುಂಬಿದ ಕಣ್ಣುಗಳಲ್ಲಿ

ಜಗತ್ತನ್ನು  ನೋಡುವುದೂ 

ಒಂದು ಅನುಭವ ತಾನೇ

ಹೀಗಂದುಕೊಳ್ಳುತ್ತಲೇ

ಕನ್ನಡಿಯ ಮುಂದೆ ಬಂದು

ಮನಸ ಓಲೈಸಲು 

ಹೆಣಗುತಿರುವೆ


ಈ ನಶ್ವರ ಬದುಕಲ್ಲಿ

ಪ್ರತಿ ಘಳಿಗೆಯನಿರಿಯುತಿದೆ

ಕಣ್ಣ ತುಂಬ ಬಾವು

ಕಣ್ಣೊಳಗೆ ಬಿದ್ದ ನೋವು

                                                       ಶೈಲಜಾ.ಬಿ


A speck of dust.


I just don't know

How this speck of dust

Got in to the eye

And haunting me hiding inside.

And  kept me waiting for

 every drop dripping.


Corner of a hand kerchief

Edge of my saree,

"Uff" the air blown by my kid,

Nothing could get rid of this.


 

To see the world with  filled eyes,

Is  also an experience,

Thinking so,

Stood before the mirror

Struggling hard to console the soul.


In this mortal life,

Eye swelled and the pain filled

Are stabbing each moment.






ಗುರುವಾರ, ಸೆಪ್ಟೆಂಬರ್ 17, 2020

ತರಗೆಲೆ ಅನುವಾದ

 ತರಗೆಲೆ https://sangaati.com/?p=11795

ಅನುವಾದ

ತರಗೆಲೆ

Brown dry leaf on a white background. With shadow stock photography

ಕನ್ನಡ ಮೂಲ: ನಾಗರೇಖಾ ಗಾಂವಕರ್

ಇಂಗ್ಲೀಷಿಗೆ: ಸಮತಾ ಆರ್.

ತರಗೆಲೆ

ಮರದಡಿಯ ನೆರಳಲ್ಲಿ ಬೆಚ್ಚಗೆ ಇತ್ತು ತರಗೆಲೆ.
ಕಾಲಾಂತರದ ಕರಿಯಪ್ಪುಗೆಯಲ್ಲಿ ಮುಂದೊಂದು ದಿನ ಹಾಗೇ
ಕೊಳೆತು ಹೋಗುವುದಿತ್ತು
ಮರಳಿ ಮಣ್ಣಡಿ ಸೇರಿ.

ದಿಗ್ಗನೇ ಬೆಳಗಿದ ನಾಜೂಕು
ಬೆಳಕಿನ ಹೊಳಪು
ಅದೇಕೋ ಅರಿವ ಹೊಸೆವ ಅನಂತದ ನೆರಳಡಿ
ತಂದು ನಿಲ್ಲಿಸಿತು.
ತರಗೆಲೆಯ ಮಾಸಿದ ಬಣ್ಣಕ್ಕೆ ಹೊಂಬಣ್ಣದ ಹೊಳಪು.
ಮತ್ತೆ ಚಿಗುರಿದಂತೆ ಸಂಭ್ರಮ.
ನೆಲದ ನಿಯಮದ ಹಾಗೇ.
ಮಬ್ಬು ಸರಿಸಿ ‘ ಕಾಣ
ಬಯಸಿದ್ದ ಮನಗಾಣು’ ಎಂದು ಎದೆ ತೆರೆದು ಆಹ್ವಾನಿಸಿ
ಅಪ್ಪಿ ಮುದ್ದಿಸಿತು ಬೆಳಕು.

ಬೆಳಕಿನ ದಾರಿಯಲ್ಲಿ ಕಣ್ಢಿಗೆಣ್ಣೆ
ಬಿಟ್ಪು ಹಾಗೇ ನೋಡುತ್ತಲೇ
ಇತ್ತು ತರಗೆಲೆ

ತಪದಂತೆ ಸೈರಿಸಿ ಬೆಳಕ ಕಿರಣ
ಹೊಳಪುಂಡು ಶಕ್ತ ನಿಲುವಲಿ
ನಿರಾಳ ಉಸಿರಾಡುತ್ತ
ಕಾಯುತ್ತಲೇ ಇತ್ತು.

ಪ್ರತಿಮಿಸುವ ಪ್ರತಿ ಪದವೂ
ಒಳಗಣ್ಣ ತೆರೆಸಿ, ವಿಸ್ಮಯದ ಅಂಚು ಎಲೆಯ ಸುತ್ತುಗಟ್ಟಿ
ತಾರೀಪುಗಳ ಹೊತ್ತ ಎಲೆಯ ಭಿತ್ತಿಯ
ಮೇಲೆ ನೂರಾರು ಚಿತ್ರಗಳ ಚಲನೆ, ಚಿಂತನೆ,
ನಿಂದನೆಯ ಎಣ್ಣೆಯಲ್ಲಿ ಹುರಿದು,
ಕಮಟು ವಾಸನೆ ಬಡಿಸಿ, ಮತ್ತೆ ಮರುಗಳಿಗೆ ತುಪ್ಪ ಮೂಗಿಗೆ ಸವರಿ,
ಬೆಳಕು ಹದವರಿತು ತರಗೆಲೆಯ
ನುಡಿಸಿತ್ತು.

ಉರಿವ ಬೆಳಕಿಂದ
ಜಿಗಿಯಬಲ್ಲ ಬೆಂಕಿಯ ತಾಪದ
ಭಯ
ಕಾಡುತ್ತಲೇ ಇತ್ತು.

ಆದರೂ ತರಗೆಲೆಗೆ ತೀರದ
ವ್ಯಾಮೋಹ.
ಹಾರುವ ಪುಟ್ಟ ಗುಬ್ಬಿಯ ಬಾಯೇರಿ, ಅದಿಟ್ಟ ಮೊಟ್ಟೆಯ ಗೂಡಿಗೆ ಮಂದರಿಯಾಗಿ
ಪುಟಪುಟ ನೆಗೆತದ ಚೀಂವ್ ಚೀಂವ್ ಮರಿಗುಬ್ಬಿಗಳ
ಕಾಲಡಿಗೆ ರೋಮಾಂಚನಗೊಳ್ಳಬೇಕು
ಚಿಲಿಪಿಲಿಯೂದುವ ತೊದಲ ನುಡಿಗಳಿಗೆ ಕಿವಿಯಾಗಬೇಕು.

ಜೀವವಿಲ್ಲದ ಒಣ ಎಲೆಯೆಂದವರ ಕಡೆಗೊಮ್ಮೆ
ನಲ್ಮೆಯ ನೋಟವೆಸಗಬೇಕು.

———————
ನಾಗರೇಖಾ ಗಾಂವಕರ.

A dry leaf..

A dry leaf resting cosily,
Under the shadow of a tree,
Was about to get degraded
In the dark embrace of time
And get mixed up with the soil as usual.

Just then all of a sudden a soft tender light
Lit up everything with its gleam.

And without any reason
Brought under the shade of
Infinite enlightenment..

The faded leaf got a new shine
And beaming as if budding anew
Just as the laws of the earth.

Removing the darkness said the light
“Perceive whatever you wanted to see “
Inviting with open arms and cuddling.

With the eyes wide open
The leaf kept on seeing
The path of light.

Bearing the light just as a penance
Devouring the light
Stood strong and breathing.
And kept on waiting..

Every word casted ,
Opened the inner eye
A mesmerizing rim
Surrounded the leaf,
Hundreds of pictures and thoughts
Are moving all over the lamina
laden with the praises.

Fried with the oil of accusations
Made to smell rancid,but
Later buttering up to console,
The light has made the leaf to say
With the right temper.

But the leaf still fears
The heat of the fire
that may emerge
From the glowing light.

But still this leaf has
An unending yearning.
Wants to fly away held in
The beak of a little sparrow,
Wants to be a quilt for it’s eggs filled nest.
Wants to be thrilled under the tripping feet
Of the tweeting nestlings.
Wants to be all ears for their
Stammering chirpings.

And wants to stare with love,
All those,who called it
“A lifeless dry leaf,”

—————————————-

Translated by Samatha.R

ಶುಕ್ರವಾರ, ಸೆಪ್ಟೆಂಬರ್ 11, 2020

ನಾನು ನನ್ನ ಅನುವಾದವೂ..

 ನಾನು,ನನ್ನ ಅನುವಾದವೂ https://sangaati.com/?p=11605

ಒಂದು ದಿನ ಸಂಜೆ ಹೀಗೇ ಸುಮ್ಮನೆ ಕುಳಿತಿರುವಾಗ ಗೆಳತಿ ಸ್ಮಿತಾಳ ಫೋನ್ ಕರೆ ಬಂತು,”ನೋಡೆ,ನನ್ನದೊಂದು ಕವನ ಇಂಗ್ಲಿಷ್ ಗೆ ಅನುವಾದ ಮಾಡಿಸಿದ್ದೇನೆ,ಓದಿ ಹೇಗಿದೆ ಹೇಳು”ಎಂದು ಹೇಳಿ ಹಿಂದೆಯೇ ವಾಟ್ಸಾಪ್ ನಲ್ಲಿ ಕನ್ನಡ ಇಂಗ್ಲಿಷ್ ಎರಡೂ ಪದ್ಯ ಕಳುಹಿಸಿದಳು.ಓದಿದಾಗ ಕನ್ನಡ ಪದ್ಯ ಇಂಗ್ಲಿಷ್  ಅನುವಾದದಲ್ಲಿ ಓದಲು ಚಂದವೆನಿಸಿ  ,ಅವಳಿಗೆ ಕರೆ ಮಾಡಿ ಹೇಳಿದೆ,ಅವಳು ಕೇಳಿ ,ತಮಾಶೆಗೆ,”ಹಾಗಾದರೆ ನನ್ನದೊಂದು ಪದ್ಯ ಕಳಿಸುವೆ, ನೀನೂ ಅನುವಾದಿಸಿ ಖುಷಿ ಪಡು”ಅಂತ ಹೇಳುವುದೇ!!

ನಾನೂ ಏನೋ ಒಂದು ಲಹರಿಯಲ್ಲಿ “ಹುಂ” ಎಂದೇನೋ ಹೇಳಿಬಿಟ್ಟೆ ,ಆದರೆ ಅವಳ ಪದ್ಯ ಬಂದು ಕುಳಿತ ಮೇಲೆಯೇ ನಿಜವಾದ ತಲೆನೋವು ಶುರುವಾಗಿದ್ದು.

 ಮೊದಲನೆಯದಾಗಿ ನಾನು ಬರಹಕ್ಕೆ ತೊಡಗಿಸಿಕೊಂಡಿದ್ದು ಕೂಡ ಆಕಸ್ಮಿಕವಾಗಿ,ಎಲ್ಲೋ ಒಂದಷ್ಟು ಲಹರಿ,ಲಲಿತ ಪ್ರಬಂಧಗಳ ಮಾತ್ರ ಬರೆದಿರುವುದು.ಓದಿದ್ದು ರಸಾಯನಶಾಸ್ತ್ರ,ಮಾಡುತ್ತಿರುವುದು ಗಣಿತ ಶಿಕ್ಷಕಿಯ ಕೆಲಸ,ಸಾಹಿತ್ಯವನ್ನು ಒಂದು ಹವ್ಯಾಸ ವೆಂಬಂತೆ ಸುಮ್ಮನೆ ನನ್ನ ಪಾಡಿಗೆ ನಾನು ಒಂದಷ್ಟು ಕನ್ನಡ ಕಥೆ,ಕಾದಂಬರಿ ಗಳ ಓದಿಕೊಂಡಿದ್ದೆ.ಕವಿತೆಗಳ ಓದು ಸ್ವಲ್ಪ ದೂರವೇ,ಏಕೆಂದರೆ ಓದಿದರೆ ಅರ್ಥವಾಗದ ಕಷ್ಟ.ಇದರ ಜೊತೆಗೆ ಇಂಗ್ಲಿಷ್ ಭಾಷೆಯ ಜೊತೆ ನಂಟು ಬೆಳದಿದ್ದು ಕೂಡ ಒಂದು ಆಕಸ್ಮಿಕವೇ.ನಾನು ವೃತ್ತಿ ಪ್ರಾರಂಭಿಸಿದ ಮೊದಲ ವರ್ಷಗಳಲ್ಲಿ ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕರ ಕೊರತೆ ಯಿಂದಾಗಿ ,”ಹೇಗೂ ವಿಜ್ಞಾನ ದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ತನಕ ಇಂಗ್ಲಿಷ್ ನಲ್ಲೆ ಕಲಿತಿರುವುದಲ್ಲವೆ ?ನೀವೇ ಇಂಗ್ಲಿಷ್ ಪಾಠ ಮಾಡಿ “ಎಂದ  ಮುಖ್ಯ ಶಿಕ್ಷಕರ ಕೋರಿಕೆಯನ್ನು ಮನ್ನಿಸಿ   ಪ್ರಾರಂಭಿಸಿದ  ಇಂಗ್ಲಿಷ್  ಶಿಕ್ಷಕಿ ಕೆಲಸ ಸುಮಾರು ಹತ್ತು ವರ್ಷಗಳವರೆಗೆ ಎಳೆದುಕೊಂಡು ಹೋಯಿತು. ಈ ಅವಧಿಯಲ್ಲಿ ಮಕ್ಕಳಿಗೆ ಕಲಿಸುವುದರ ಜೊತೆಗೆ ನಾನೂ ಸಾಕಷ್ಟು ಕಲಿತೆ ಎಂದರೆ ತಪ್ಪಾಗಲಾರದು.ಅದರಲ್ಲೂ ಇಂಗ್ಲಿಷ್.ಪದ್ಯಗಳು, ರೈಮ್ಸ್ ಗಳ ಮಕ್ಕಳಿಗೆ ಕಲಿಸುತ್ತಾ ಕಲಿಸುತ್ತಾ ನಾನೇ ಹೆಚ್ಚು ಖುಷಿ ಪಟ್ಟಿದ್ದೇನೆ.

ಈ ಹಿನ್ನೆಲೆಯಲ್ಲಿ ಸ್ಮಿತಾ ಕೊಟ್ಟ ಪದ್ಯದ ಅನುವಾದ ಮಾಡಲು ಕುಳಿತಾಗ ಮೊದಲು ಎದುರಾದ ಪ್ರಶ್ನೆ ಸೂಕ್ತ ಪದಗಳನ್ನು ಹುಡುಕುವುದು.ಈಗ ಯಾವುದೇ ಒಂದು ಭಾಷೆಯ ಒಂದು ಪದ ತೆಗೆದುಕೊಂಡರೆ ಅದು ಬರಿ ಒಂದು ಸರಳ ನೇರ ಅರ್ಥವನ್ನೇನು ಹೊಂದಿರುವುದಿಲ್ಲ.ಅದರ ಬಳಕೆಗೆ ಅನುಗುಣವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥ ಕೊಡುತ್ತಾ ಹೋಗುತ್ತದೆ.ಅಲ್ಲದೆ ಭಾಷೆ ಅನ್ನೋದು ಕೇವಲ ಒಂದು ಸಂಪರ್ಕ ಮಾದ್ಯಮ ಮಾತ್ರ ಅಲ್ಲ.ಒಂದು ಭಾಷೆ ಎಂದರೆ ನನಗನ್ನಿಸುವಂತೆ ಅದನ್ನಾಡುವ ಜನರ ಕಲೆ,ಸಂಸ್ಕೃತಿ, ಪರಂಪಾನುಗತವಾಗಿ ಬಂದಿರುವ ನಂಬಿಕೆ,ಆಚರಣೆಗಳು ಎಲ್ಲವೂ ಸೇರಿ ಆಗಿರುವ ಒಂದು ಜೀವಂತ ಪ್ರಕ್ರಿಯೆ ಭಾಷೆ.ಕೆಲವೊಂದು ರೂಡಿ ಆಚರಣೆಗಳು ಒಂದು ಪ್ರದೇಶ,ದೇಶ,ಇಲ್ಲವೇ ಒಂದು ನಿರ್ದಿಷ್ಟ ಜನಾಂಗಕ್ಕೆ ಸೀಮಿತವಾಗಿದ್ದು ಅವುಗಳ  ಸೂಚಿಸುವ ಪದಗಳು ,ಬೇರೊಂದು ಭಾಷೆಯನ್ನಾಡುವ,ಬೇರೆಯೇ ಪ್ರದೇಶಕ್ಕೆ ಸೇರಿರುವ, ಆ ನಿರ್ದಿಷ್ಟ ಆಚರಣೆ, ರೂಡಿಗಳು ಇರದೇ ಇರುವ ಜನರ ಭಾಷೆಯಲ್ಲಿ ಅವುಗಳ ಸೂಚಿಸುವ ಯಾವುದೇ ಪದಗಳು ಇಲ್ಲದಿರಬಹುದು. ಮೂಲಕ್ಕೆ ತೀರ ಹತ್ತಿರದ ಪದ ಬಳಸಿದರೂ ಅಪರಿಚಿತ ವೆನಿಸಬಹುದು.ಹಾಗಾಗಿ ಪದದ ಜೊತೆಗೆ ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ಇನ್ನೊಂದು ಭಾಷೆಯಲ್ಲಿ ಹೇಳುವುದು ಕಷ್ಟವೇ.ಉದಾಹರಣೆಗೆ ಹೇಳುವುದಾದರೆ ಸ್ಮಿತಾಳ ಒಂದು ಕವಿತೆಯಲ್ಲಿ ಕೊಡ ಅನ್ನುವ ಪದಕ್ಕೆ ಸಂವಾದಿಯಾದ ಇಂಗ್ಲಿಷ್ ಪದ ಹುಡುಕುವುದು ಬಹಳ ಕಷ್ಟವೇ ಆಯಿತು.ಬಾವಿಯಿಂದ ನೀರು ಸೇದಲು ಕೊಡ ಬಳಸುವ ಬದಲು ವಿದೇಶಗಳಲ್ಲಿ pail ಅನ್ನುವ ಬಕೆಟ್ ಆಕಾರದ ಪಾತ್ರೆ ಬಳಸುತ್ತಾರೆ.ಜ್ಯಾಕ್ ಅಂಡ್ ಜಿಲ್ ಪದ್ಯದಲ್ಲಿ ಬರುತ್ತೇ ನೋಡಿ.ಹಾಗೆ ಯಾವ ಶಬ್ದಕೋಶವನ್ನು  ಹುಡುಕಿದರೂ ಯಾವ ಪದವೂ ಸಮಾಧಾನ ತರದೆ ಕೊನೆಗೆ ಹತ್ತಿರ ಎನಿಸುವ pitcher ಬಳಸಿದ್ದಾಯಿತು.

ಹಾಗೆಯೇ ಇನ್ನೂ ಕೆಲವು ಆಚರಣೆ ಗಳ ಗಮನಿಸಿದಾಗ,ಅಯ್ಯಪ್ಪನ ವ್ರತ  ನಮ್ಮ ದೇಶದ ಒಂದು

ವಿಶಿಷ್ಟ ಆಚರಣೆ.ಶೋಭಾ ಹಿರೆಕೈ ಅವರ ಪದ್ಯದ ಅನುವಾದ ಏನೋ ಮಾಡಿದೆ,ಆದರೆ.ಅದು ಭಾರತೀಯ ರಲ್ಲದವರು ಓದಿದರೆ ಅವರಿಗೆ, ಆ ವ್ರತ ಮಾಡುವ ಕ್ರಮ,ಅದರ ಹಿನ್ನೆಲೆ,ಹಿಂದಿರುವ ವಿವಾದ ಇವುಗಳೆಲ್ಲ ಗೊತ್ತಿರದಿದ್ದರೆ ,ಕವನ ಅವರನ್ನು ಹೇಗೆ ತಲುಪೀತು?.

   ಹಾಗೆಯೇ ಸುನೀತ ರವರ ಒಂದು ಪದ್ಯದಲ್ಲಿ ಬರುವ ಪಂಚಾಯತ್ ಪದ ಕೂಡ ಕಾಡಿಸಿತು.ಬೇರೆ ಬೇರೆ ದೇಶಗಳ ಆಡಳಿತ ವ್ಯವಸ್ಥೆ ಬೇರೆ ಬೇರೆ ಹಾಗಾಗಿ ಎಲ್ಲ ಕಡೆ ಹೊಂದುವಂಥ ಪದಕ್ಕಾಗಿ ತಡಕಾಡಿ, ಕೊನೆಗೆ council ಪದ ಬಳಸಿದರೂ ನನಗೆ ಅಷ್ಟು ಸಮಾಧಾನವಿಲ್ಲ.

ಇನ್ನು “ಜಲರಾಶಿ”ಪದ ಬಂದಾಗ.ನನ್ನ ವಿಜ್ಞಾನ ಓದಿದ ತಲೆ “ಛೆ,ಕೇವಲ ಘನ ವಸ್ತುಗಳನ್ನ ಮಾತ್ರ ರಾಶಿ ಮಾಡಲು ಸಾಧ್ಯ,ದ್ರವಗಳನ್ನು ರಾಶಿ ಮಾಡಲಾದೀತೇ”ಎಂದು ಗುಮಾನಿ ಎಬ್ಬಿಸಿ,”ಪದ ಪದ ಅನುವಾದ ಬೇಡ ಬಿಡು “ಎಂದುಕೊಂಡು ಅದನ್ನು aquatic treasure ಮಾಡಿದ್ದಾಯಿತು.

ಹಾಗೆ ಇನ್ನೊಂದೆರಡು ಕವನಗಳ ಅನುವಾದಿಸುವಾಗಾ ಇಂಗ್ಲಿಷ್ ಗ್ರಾಮರ್ ಸರಿಯಿದೆಯ?ಅನ್ನುವ ಸಣ್ಣ ಗುಮಾನಿ ಬೇರೆ ಕಾಡಿ ನನ್ನ ಕೆಲವು ಇಂಗ್ಲಿಷ್ ಶಿಕ್ಷಕ ಸ್ನೇಹಿತರನ್ನು ಕೇಳಿದಾಗ ಓರ್ವ ಸ್ನೇಹಿತೆ “ಗ್ರಾಮರ್ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಳ್ಳಬೇಡಿ,ಪದ್ಯದ ಲಯ ತಪ್ಪದ ಹಾಗೆ,ಕೇವಲ ಪದದಿಂದ ಪದ ಅನುವಾದ ಮಾಡುವ ಬದಲು ಇಡಿಯಾಗಿ ಭಾವವನ್ನು ಹಿಡಿಯುವ ಪ್ರಯತ್ನ ಮಾಡಿ”ಎಂದು ಸಲಹೆ ಕೊಟ್ಟರು.

ಅದರಂತೆ ಅನುವಾದಿಸಲು ಇರುವ ಕವನವನ್ನು ಮತ್ತೆ ಮತ್ತೆ ಓದಿಕೊಂಡು,ಅನುಮಾನ ಬಂದ ಕಡೆ ಮೂಲ ಕವಿಯ ಬಳಿಯೇ ಮಾತನಾಡಿ, ಮೊದಲಿಗೆ ಮೂಲ ಪದ್ಯ ಏನನ್ನ ಹೇಳಲು ಹೊರಟಿದೆ ಅನ್ನುವುದರ ಕಡೆಗೆ ಗಮನ ನೀಡಲು ಪ್ರಯತ್ನಿಸಿದೆ.ಅದರ ಬಳಿಕವೇ ನನ್ನ ಲಹರಿ ಉಕ್ಕಿದ ಹಾಗೆ ಅನುವಾದಿಸಿದೆ.

ಬಳಿಕ ಅನುವಾದವನ್ನು ಮತ್ತೆ ಮತ್ತೆ ಓದಿಕೊಂಡು,ಮೂಲದ ಜೊತೆಗೆ ಹೋಲಿಸಿಕೊಂಡು ಸಾಧ್ಯವಾದಷ್ಟು ತಿದ್ದಿ ತೀಡಿ ನಂತರ ಮೂಲ ಕವಿಗೆ ತೋರಿಸಿ ಅವರು ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವೇ ಸಮಾಧಾನ.

ಕವಿತೆ ಯೊಂದನ್ನು ಅನುವಾದಿಸಲು ಕುಳಿತಾಗ ,ಗಣಿತ ಶಿಕ್ಷಕಿಯಾದ ನನಗೆ ಸಮೀಕರಣ ವೊಂದನ್ನು ಬಿಡಿಸಿದ ಹಾಗೆಯೇ ಅನ್ನಿಸುತ್ತದೆ.ಒಂದು ಸಮಸ್ಯೆ ಯನ್ನ ಅರ್ಥೈಸಿಕೊಂಡು,ಅದಕ್ಕೆ ಸೂಕ್ತ ನಿಯಮಗಳು,ಸ್ವಯಂ ಸಿದ್ಧಗಳ  ಬಳಸಿ , ಹಂತ ಹಂತವಾಗಿ ಬಿಡಿಸಿದಾಗ ಸಿಗುವ ಸಂತೋಷವೇ,ನನಗೆ ಕವಿತೆಯೊಂದನ್ನು ಅನುವಾದಿಸಿ ದಾಗ ಕೂಡ ಸಿಕ್ಕಂತಾಗುತ್ತದೆ.

ಅನುವಾದಿಸಿದ ಬಳಿಕ  ಸಂಗಾತಿಯಲ್ಲಿ ಪ್ರಕಟಗೊಂಡು ಓದಿದವರಲ್ಲಿ ಕೆಲವರು ನನ್ನನ್ನು ಸಂಪರ್ಕಿಸಿ,”ಅನುವಾದ ಚೆನ್ನಾಗಿ ಮಾಡಿದ್ದೀರಿ,ಮುಂದುವರೆಸಿ “ಎಂದು ಪ್ರೋತ್ಸಾಹಿಸಿದಾಗ ತುಂಬಾ ಖುಷಿಯಾಯಿತು.

ನಾನೆಂದೂ ಕವಿತೆ ಬರೆದವಳಲ್ಲಾ ಆದರೆ ಕವಿತೆ ಗಳ ಅನುವಾದ ಮಾಡಲು ಶುರು ಮಾಡಿದ ಬಳಿಕ ಕಾವ್ಯಕ್ಕಿರುವ ಅದ್ಭುತ ಶಕ್ತಿ ಯ ಅರಿವು ಸ್ವಲ್ಪ ಸ್ವಲ್ಪವೇ ಆಗುತ್ತಿದೆ.ಅನುವಾದದಿಂದಾಗಿ ಇನ್ನೊಬ್ಬರ ಭಾವ ಪ್ರಪಂಚದ ಒಂದು ತುಣುಕನ್ನಾದರೂ ನನ್ನದಾಗಿಸಿಕೊಳ್ಳುವ ಸಂಭ್ರಮ.ಇದೊಂದು ರೀತಿ ಕನ್ನಡದ ಪದ್ಯದಿಂದ ಬಸಿರಾಗಿ ಇಂಗ್ಲಿಷ್ ಮಗುವೊಂದನ್ನು ಹೆರುವಂತಹ ಬಾಡಿಗೆ ತಾಯಿಯ ಕೆಲಸದಂತಾಗಿ ಬಿಟ್ಟಿದೆ ನನಗೆ.

*******************************

ಉಪ್ಪಿನ ಕಾಯಿಗೆ ಒಂಚೂರು ಅನ್ನ...ಸುರಹೊನ್ನೆ

 ಉಪ್ಪಿನ ಕಾಯಿಗೆ ಒಂಚೂರು ಅನ್ನ..   "ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ"ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆ ಯೇ ದೇವರ ಮನೆಯ...