ಪರಿಸರ ಪ್ರಜ್ಞೆ ಮತ್ತು ನಾಗರಿಕ ಪ್ರಜ್ಞೆ
ಮತ್ತೆ ಎಂದಿನಂತೆ ಪರಿಸರ ದಿನಾಚರಣೆ ಬಾಗಿಲಿಗೆ ಬಂದಿದೆ. ಪ್ರತೀ ವರ್ಷವೂ ಬರುತ್ತದೆ ,ನಾವುಗಳು ಪ್ರತಿವರ್ಷವೂ ಅದೇ ಅದೇ ಹಳತಾದ ಭಾಷಣಗಳು,ಅದೇ ಗಿಡನೆಡುವ ಕಾರ್ಯಕ್ರಮ ಮಾಡಿ ಅದನ್ನು ಕಳುಹಿಸಿ ಕೊಟ್ಟು,ಎಂದಿನಂತೆ ನಮ್ಮ ನಮ್ಮ ಅರಿವಿನ ಬಾಗಿಲು ಮುಚ್ಚಿಕೊಂಡು ,ನಮ್ಮ ದುರಾಸೆಯ ,ವಿಪರೀತ ವಸ್ತು ವ್ಯಾಮೋಹದ ಜೀವನ ಶೈಲಿಗೆ ಮರಳಿ ಹೋಗುತ್ತೇವೆ.
ಆದರೆ ಈ ಬಾರಿ ಪರಿಸರ ದಿನ ತಾನೊಂದೇ ಬಂದಿಲ್ಲ ಜೊತೆಯಲ್ಲಿ ಕರೋನ ಮಹಾಮಾರಿಯ ಕರೆತಂದಿದೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮ ಈ ಪರಿಸರವನ್ನ ಉಳಿಸುವೆಡೆಗೆ ದೃಢ ಸಂಕಲ್ಪ ಕೈಗೊಂಡು ಕಾರ್ಯ ಪ್ರವೃತ್ತರಾಗದೆ ಹೋದರೆ ನಮ್ಮೆಲ್ಲರ ವಿನಾಶ ಕಟ್ಟಿಟ್ಟ ಬುತ್ತಿ.
ಪರಿಸರದಲ್ಲಿ ಪ್ರತಿಯೊಂದೂ ಇನ್ನೊಂದರೊಂದಿಗೆ ಲಗತ್ತಿಸಿಕೊಂಡಿದೆ ಅಂತ ವಿಜ್ಞಾನ ಹೇಳುತ್ತದೆ.ಪರಿಸರದಲ್ಲಿ ಮಾನವನಿಗೆ ಎಷ್ಟು ಮಹತ್ವವಿದೆಯೋ ಒಂದು ಚಿಕ್ಕ ಇರುವೆಗೂ ಅಷ್ಟೇ ಮಹತ್ವವಿದೆ,ಜಗತ್ತಿನ ಅತ್ಯಂತ ಬೃಹತ್ ಜೀವಿಯಾದ ನೀಲಿ ತಿಮಿಂಗಿಲ ಎಷ್ಟು ಬೆರಗು ಹುಟ್ಟಿಸುವುದೋ ಅದಕ್ಕಿಂತ ಹೆಚ್ಚಿನ ಬೆರಗು , ದಿಗಿಲನ್ನು ಕಣ್ಣಿಗೇ ಕಾಣದ ಅತ್ಯಂತ ಸೂಕ್ಷ್ಮ ಜೀವಿಯಾದ ಕರೋನ ಎಂಬ ಒಂದು ವೈರಸ್ ಹುಟ್ಟಿಸಿ ಬಿಟ್ಟಿದೆ.
ಆದರೆ ಪರಿಸರದ ಸೂಕ್ಷ್ಮ ಪರಸ್ಪರ ಕೊಂಡಿಗಳನ್ನ ಅರಿಯದ ಮಾನವ ತನ್ನ ದುರಾಸೆಯಿಂದಾಗಿ,ತನಗೊಬ್ಬನಿಗೆ ಈ ಭೂಮಿ,ಅದರ ಎಲ್ಲ ಸಂಪನ್ಮೂಲ ಅನ್ನುವ ಅಹಂಕಾರದಿಂದ ವಿಪರೀತವಾಗಿ ಬಳಕೆ ಮಾಡುತ್ತಾ,ಅದರಿಂದ ತನ್ನ ಗೋರಿ ತಾನೇ ತೋಡಿ ಕೊಳ್ಳುತ್ತಾ ಸಾಗಿದ್ದಾನೆ.
ವಿಪರೀತ ಕೈಗಾರಿಕೀಕರಣ,ಅರಣ್ಯನಾಶ,ಅಭಿವೃದ್ದಿ ಯ ಹೆಸರಲ್ಲಿ ಬರಿದಾಗಿಸುತ್ತ ಹೋಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳು ಎಲ್ಲವೂ ಭೂಮಿಯನ್ನು ಬರಡಾಗಿಸುತ್ತ
ಹೋಗುತ್ತಿವೆ.
ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಂಡು ಪರಿಸರದ ಸೂಕ್ಷ್ಮ ಜೀವಜಾಲ ಸಮತೋಲನವನ್ನು ಕಾಪಾಡಿಕೊಂಡು ಹೋಗದಿದ್ದರೆ ,ನಮ್ಮ ಸುಂದರ ನೀಲಿಗೋಲವಾದ ಭೂಗ್ರಹ ಸೌರ ಮಂಡಲದ ಇತರೆ ಬರಡು ಗ್ರಹಗಳ ಸಾಲಿಗೆ ಸೇರುವ ದಿನ ದೂರವಿಲ್ಲ.
ಹಾಗಾಗಿ ನಮ್ಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತ ರಾಗ ಬೇಕಾಗಿರುವುದು ನಮ್ಮ ಅತ್ಯಂತ ಆದ್ಯಕರ್ತವ್ಯವಾಗಿದೆ.
ಪರಿಸರ ಸಂರಕ್ಷಣೆ ಕಾರ್ಯ ದಲ್ಲಿ ತೊಡಗಿಸಿಕೊಳ್ಳಲು
"ಸಾವಿರ ಮೈಲುಗಳ ಪ್ರಯಾಣ ವಾದರೂ ಒಂದು ಹೆಜ್ಜೆಯಿಂದ ಪ್ರಾರಂಭ ವಾಗಬೇಕು"ಅನ್ನುವ ಮಾತಿನಂತೆ ನಾವೆಲ್ಲರೂ ನಮ್ಮಿಂದ ಆಗುವ ಚಿಕ್ಕ ಚಿಕ್ಕ ಪ್ರಯತ್ನಗಳನ್ನ ಯಾಕೆ ಮಾಡಬಾರದು?
ಒಮ್ಮೆ ನಾನು ಕೆಲಸ ಮಾಡುವ ಶಾಲೆಯಿರುವ ಗ್ರಾಮದ ಪಂಚಾಯತ್ ನ ಅಭಿವೃದ್ದಿ ಅಧಿಕಾರಿ ಅಂದರೆ ಪಿ ಡಿ ಒ
ಶಾಲೆಗೆ ಬಂದು ಮಾತನಾಡುತ್ತಿರುವಾಗ,ಗ್ರಾಮದ ವಿದ್ಯುತ್ ಬಿಲ್ ಅಧಿಕ ಪ್ರಮಾಣ ದಲ್ಲಿ ಬಂದಿರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾ,ನಮ್ಮೆಲ್ಲ ರೊಂದಿಗೆ ಮಾತನಾಡುತ್ತ "ನೋಡಿ ಮೇಡಂ,ಹಳ್ಳಿಯಲ್ಲಿ ಎಲ್ಲರೂ ಸಮಯಕ್ಕೆ ಸರಿಯಾಗಿ ಬೀದಿ ದೀಪಗಳನ್ನು ಹಾಕುವುದು,ಆರಿಸುವುದು ಮಾಡಬಹುದಿತ್ತು,ಕೆಲವು ಸಾರಿ ಸಂಜೆ ಐದು ಘಂಟೆಗೆ ಹಾಕಿ ಬೆಳಿಗ್ಗೆ ಎಂಟು ಗಂಟೆಯಾದರೂ ಕೆಲವು ಬೀದಿಗಳಲ್ಲಿ ದೀಪ ಉರಿಯುತ್ತಿರುವದನ್ನು ನೋಡಿದ್ದೇನೆ.ಎಷ್ಟೋ ಸಾರ್ವಜನಿಕ ನಲ್ಲಿಗಳಲ್ಲಿ ನೀರು ಹರಿದು ಹೋಗುತ್ತಿರುತ್ತದೆ,ಕಸ ಸಂಗ್ರಹಣೆ ಯ ವ್ಯಾನ್ ಬರುವ ತನಕ ಕಾಯುವ ವ್ಯವಧಾನವೂ ಕೆಲವರಿಗೆ ಇರುವುದಿಲ್ಲ,ಖಾಲಿ ಸೈಟ್ ಕಂಡರೆ ಸಾಕು ಕಸ ಎಸೆದು ಹೋಗುತ್ತಿರುತ್ತಾರೆ.ತಮ್ಮ ಅಕ್ಕ ಪಕ್ಕ ಚೆನ್ನಾಗಿ ಇಟ್ಟು ಕೊಳ್ಳುವ ನಾಗರಿಕ ಪ್ರಜ್ಞೆ ಬೇಡವೇ?ಇದೆಲ್ಲದಕ್ಕೆ ನಮ್ಮ ಪಂಚಾಯತ್ ಹಣವನ್ನು ಕಟ್ಟಬೇಕು.ಇಷ್ಟು ಸಣ್ಣ ಸಣ್ಣ ವಿಷಯಗಳ ಕಡೆಗೆ ನಮ್ಮ ಜನ ಗಮನ ಹರಿಸಿದರೆ ಸಾಕು,ಉಳಿತಾಯವಾಗುವ ಹಣವನ್ನು ಊರಿನ ಅಭಿವೃದ್ಧಿಗೆ ಬಳಸ ಬಹುದಲ್ಲವೆ"ಎಂದು ಹೇಳಿದರು.
ಹೌದಲ್ಲವೇ ಒಂದು ಚಿಕ್ಕ ಗ್ರಾಮಕ್ಕೆ ಅನ್ವಯಿಸುವುದು ಇಡೀ ಪ್ರಪಂಚಕ್ಕೆ ಅನ್ವಯಿಸುವುದಿಲ್ಲವೇ.ನಾವು ಕಸ ಹಾಕುತ್ತೇವೆ ನೀವು ಶುಚಿ ಮಾಡಿ ಅಂತ ಎಲ್ಲಾ ವಿಷಯಕ್ಕೂ ಸರ್ಕಾರವನ್ನು ದೂರುವುದು ಸರಿಯೇ?ನಾಗರಿಕರಾಗಿ ನಮ್ಮ ಕರ್ತವ್ಯಗಳೂ ಕೂಡ ಕೆಲವು ಇಲ್ಲವೇ?
ಪ್ರತಿನಿತ್ಯ ಸಂಜೆಯ ವಾಕ್ ಮಾಡುವಾಗ ರಸ್ತೆ ಬದಿಯಲ್ಲಿ ಎಸೆದಿರುವ ಕಸ ನೋಡಿದಾಗ ತಮ್ಮ ಕಸವನ್ನು ತಾವೇ ಸರಿಯಾಗಿ ನಿರ್ವಹಣೆ ಮಾಡಲಾಗದ ಜನರ ಬಗ್ಗೆ ಅಪಾರ ಕೋಪ ಬರುತ್ತದೆ.ಮನೆಯಲ್ಲಿ ಕಸದ ನಿರ್ವಹಣೆ ಏನೂ ಅಂತಹ ರಾಕೆಟ್ ಸೈನ್ಸ್ ಅಲ್ಲ ಬಿಡಿ.ಚಿಕ್ಕ ಚಿಕ್ಕ ವಿಷಯಗಳ ಕಡೆಗೆ ಗಮನ ನೀಡಿದರೆ ಸಾಕು ಪ್ರತಿ ಮನೆಯು ಶೂನ್ಯ ಕಸ ಉತ್ಪಾದಿಸುವ ಮನೆಯಾಗಬಹುದು.ಅಂಗಡಿಯಿಂದ ಯಾವುದೇ ಸಾಮಗ್ರಿ,ಹಣ್ಣು ತರಕಾರಿ ತರುವಾಗ ಒಂದು ಬಟ್ಟೆಯ ಕೈಚೀಲ ತೆಗೆದು ಕೊಂಡು ಹೋದರಾಗದೆ?ಮನೆಯಲ್ಲೇ ಹಳೇ ನ್ಯೂಸ್ ಪೇಪರ್ ಬಳಸಿ ಚಿಕ್ಕ ಚಿಕ್ಕ ಪೇಪರ್ ಬ್ಯಾಗ್ ತಯಾರಿಸಿ ಕೊಂಡು ಅಂಗಡಿ ಸಾಮಗ್ರಿಗಳನ್ನ ತಂದರೆ ಅನಗತ್ಯವಾಗಿ ಪ್ಲಾಸ್ಟಿಕ್ ಕವರ್ ಗಳನ್ನೂ ಬಳಸುವುದು ತಪ್ಪುತ್ತದೆ..ಮನೆಯಲ್ಲೇ ತಾರಸಿಯಲ್ಲಿ,ಬಾಲ್ಕನಿಯಲ್ಲಿ ಇಲ್ಲವೇ ಹೊರಗಡೆ ಅಂಗಳದಲ್ಲೇ ಒಂದು ನಾಲ್ಕಾರು ಗಿಡಗಳ ಕುಂಡಗಳನ್ನಿಟ್ಟು ಕೊಂಡರೆ ಮನೆಯ ತರಕಾರಿಗಳ ಹಣ್ಣಿನ ಸಿಪ್ಪೆಯನ್ನು ಗೊಬ್ಬರವಾಗಿ ಬಳಸಬಹುದು. ಕೈತೋಟವಿದ್ದರೆ ಇನ್ನೂ ಚೆನ್ನ. ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಬಳಸಬಹುದು. ಊಟಾ ಮಾಡುವಾಗ ಸ್ವಲ್ಪವೂ ತಟ್ಟೆಯಲ್ಲಿ ಬಿಡದಂತೆ ತಿನ್ನುವ ಅಭ್ಯಾಸ ನಾವೂ ಮಾಡಿಕೊಂಡು ನಮ್ಮ ಮಕ್ಕಳಿಗೂ ಮಾಡಿಸಿದರೆ ಅದರಿಂದ ಎಷ್ಟೋ ಕಸದ ಉತ್ಪತ್ತಿ ಆಗುವುದು ನಿಲ್ಲುವುದಿಲ್ಲವೇ.
ಇನ್ನ ಮರು ಬಳಕೆಗೆ, ಮರು ಚಕ್ರೀಕರಣಕ್ಕೆ ಒಳಪಡಬಲ್ಲ ವಸ್ತುಗಳನ್ನು ಬಳಸಿ ಹಲವು ಉಪಯುಕ್ತ ವಸ್ತುಗಳನ್ನು ತಯಾರಿಸಲು ಈಗ ಎಷ್ಟೊಂದು ಅವಕಾಶ,ಮಾರ್ಗದರ್ಶನ ಲಭ್ಯವಿದೆ.ಅಂತರ್ಜಾಲ ಹುಡುಕಿದರೆ ಸಾಕು ಎಷ್ಟೊಂದು ಮಾಹಿತಿ ಈ ತ್ಯಾಜ್ಯ ವಸ್ತುಗಳ ಮರುಬಳಕೆ ಬಗ್ಗೆ ಸಿಗುತ್ತದಲ್ಲವೆ.
ಮನೆಯ ಒಳಾಂಗಣ ಅಲಂಕಾರಕ್ಕೆ ಲಕ್ಷಗಟ್ಟಲೆ ವ್ಯಯ ಮಾಡುವ ಜನ , ಆ ವೆಚ್ಚದ ಸ್ವಲ್ಪ ಭಾಗವನ್ನದರೂ ಮಳೆನೀರು ಕುಯಿಲಿಗೆ,ಸೌರ ವಿದ್ಯುತ್ ವ್ಯವಸ್ಥೆಗೆ ಬಳಸಿದರೆ ಎಷ್ಟು ಚೆನ್ನ.
ಕೆಲವರಿಗಂತೂ ವಾಹನಗಳಿಲ್ಲದೆ ಒಂದು ನಾಲ್ಕು ಹೆಜ್ಜೆಯೂ ನಡೆಯಲಾಗದು.ನಡೆದು ಹೋಗಿಯೇ ತಲುಪಬಲ್ಲ ಜಾಗಗಳಿಗೂ ಬೈಕ್,ಕಾರ್ ತೆಗೆಯುವವರು ತಮ್ಮ ಈ ದುರಭ್ಯಾಸ ಎಂದು ಬಿಡುವರೋ.ಚಿಕ್ಕ ಚಿಕ್ಕ ದೂರಗಳಿಗೆ ಕಾಲ್ನಡಿಗೆ ಇಲ್ಲವೇ ಬೈಸಿಕಲ್ ಬಳಸಿದರೆ ಹಣವೂ ಉಳಿದು,ಆರೋಗ್ಯವೂ ಹೆಚ್ಚುತ್ತದೆ.
ಮನೆಯ ಬಳಿಯ ಬೀದಿದೀಪಗಳನ್ನು ಅನಾವಶ್ಯಕವಾಗಿ ಉರಿಸುವುದನ್ನು ತಪ್ಪಿಸುವುದು,ನಮ್ಮ ನಮ್ಮ ಮನೆಗಳಲ್ಲೇ ವಿದ್ಯುತ್ ಮತ್ತು ನೀರಿನ ಮಿತಬಳಕೆ,ನಮ್ಮ ಮನೆಯ ಕಸದ ಸೂಕ್ತ ವಿಲೇವಾರಿ ನಾವೇ ಮಾಡಿಕೊಳ್ಳುವುದು ಇದೆಲ್ಲ ಅತ್ಯಂತ ಚಿಕ್ಕ ಚಿಕ್ಕ ವಿಷಯಗಳಾದರೂ ,ಸಮುದಾಯದ ಪ್ರತಿಯೊಬ್ಬರೂ ಮಾಡಿದರೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅವುಗಳು ದೊಡ್ಡ ಕೊಡುಗೆಯನ್ನೇ ನೀಡಬಲ್ಲವು.
ಮಕ್ಕಳಿಗೆ ಎಳವೆಯಿಂದಲೆ ಪರಿಸರ ಪ್ರಜ್ಞೆ ಖಂಡಿತವಾಗಿ ಬೆಳೆಸ ಬೇಕಾಗಿರುವುದು ಎಲ್ಲಾ ಹೆತ್ತವರ ಮತ್ತು ಶಿಕ್ಷಕರ ಕರ್ತವ್ಯ.
ನಾನು ಕೆಲಸ ಮಾಡುವ ಶಾಲೆಯಲ್ಲಿ ಯಾವುದೇ ಮಗುವಿನ ಇಲ್ಲವೇ ಶಿಕ್ಷಕರ ಜನ್ಮ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಗುತ್ತಿದೆ .ಮಕ್ಕಳು ಅವರ ಜನ್ಮದಿನದಂದು ಚಾಕೋಲೇಟ್ ಹಂಚುವ ವಾಡಿಕೆ ಇತ್ತು.ಆದರೆ ಮಕ್ಕಳು ಚಾಕೋಲೇಟ್ ತಿಂದ ಬಳಿಕ ಅದರ ಪ್ಲಾಸ್ಟಿಕ್ ಕವರ್ ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು.ದೊಡ್ಡ ಗಾತ್ರದ ಪ್ಲಾಸ್ಟಿಕ್ ಕಸ ಮರು ಬಳಕೆ ಮಾಡುವುದು ಸಾಧ್ಯ ಆದರೆ ಲೆಕ್ಕಕ್ಕೆ ಸಿಗದ ಈ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ತುಣುಕುಗಳು ಸುಲಭವಾಗಿ ಮಣ್ಣು ಸೇರಿ ಹೆಚ್ಚಿನ ಪ್ರಮಾಣದ ಹಾನಿ ಉಂಟು ಮಾಡುತ್ತವೆ.ಆದ್ದರಿಂದ ಮಕ್ಕಳಲ್ಲಿ ಪರಿಸರ ಜಾಗೃತಿಯ ಅರಿವನ್ನು ಮೂಡಿಸುವ ಸಲುವಾಗಿ ನಮ್ಮ ಶಾಲೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಶಾಲೆಯನ್ನಾಗಿ ಮಾಡುವ ಗುರಿ ಸಾಧನೆಗಾಗಿ ಮಕ್ಕಳು ತಮ್ಮ ಹುಟ್ಟು ಹಬ್ಬದ ದಿನ ಶಾಲೆಯಲ್ಲಿ ಚಾಕಲೇಟ್ ಹಂಚುವ ಬದಲು ಒಂದು ಗಿಡ ನೀಡುವಂತೆ ಮಕ್ಕಳಿಗೆ ತಿಳಿಸಿದಾಗ ಅವರಿಂದ ಅತ್ಯಂತ ಉತ್ಸಾಹದ ಪ್ರತಿಕ್ರಿಯೆ ಬಂದಿತು. ಮಕ್ಕಳು ಗಿಡ ತಂದು ಅವರೇ ನೆಟ್ಟು ,ವರ್ಷವಿಡೀ ಅದನ್ನು ನೋಡಿ ಕೊಳ್ಳುವಂತೆ ಪ್ರೋತ್ಸಾಹಿಸುವ ಈ ಕಾರ್ಯಕ್ರಮ ಮಕ್ಕಳಿಗೆ ಬಹಳ ಮುದ ನೀಡಿದೆ.
ಮರು ಚಕ್ರಿಕರಣ ದ ಬಗೆಗೂ ಶಾಲೆಯಲ್ಲಿ ಮಾಹಿತಿ ನೀಡಲಾಗುತ್ತಿದೆ. ಬಳಸಿ ಎಸೆದ ಪ್ಲಾಸ್ಟಿಕ್ ನೀರಿನ ಬಾಟಲ್ ಗಳು ನಮ್ಮ ಮಕ್ಕಳ ಕೈಯಲ್ಲಿ ಹೂ ಬೆಳೆಸುವ ಕುಂಡಗಳಾಗಿವೆ.ಅಕ್ಷರ ದಾಸೋಹ ಅಡಿಗೆ ಮನೆಯ ಅಕ್ಕಿ ಬೇಳೆ ತೊಳೆದ ನೀರು ಈ ಹೂ ಕುಂಡಗಳ ಗಿಡಗಳ ಪಾಲು.ಅಡಿಗೆ ಮನೆಯ ತರಕಾರಿ ಸಿಪ್ಪೆಗಳನ್ನು ಗೊಬ್ಬರದ ಗುಂಡಿಗೆ ಹಾಕುತ್ತಿದ್ದಾರೆ..ಶಾಲೆಯಲ್ಲಿ ಪೇಪರ್ ಹರಿಯುವುದೂ ನಿಷಿದ್ಧ.ಒಂದು ಹಾಳೆ ಹರಿದು ವ್ಯರ್ಥಮಾಡಿದರೆ ಅದು ಮರವೊಂದರ ರೆಂಬೆ ಮುರಿದಂತೆ ಎಂದು ಮಕ್ಕಳ್ಳಲ್ಲಿ ಹೇಳಿದ್ದರಿಂದ ಈಗ ಶಾಲೆಯಲ್ಲಿ ಬೀಳುವ ಕಸದ ಪ್ರಮಾಣ ಇಲ್ಲವೆಯಿಲ್ಲ ಎಂಬಷ್ಟು ಕಡಿಮೆಯಾಗಿದೆ.ಮಕ್ಕಳಲ್ಲಿ ಎಳವೆ ಯಿಂದಲೆ ಪರಿಸರ ಜಾಗೃತಿ ಮೂಡಿಸುವುದು ಇಂದಿನ ತುರ್ತು..ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಎಲ್ಲ ಶಿಕ್ಷಕರು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದಾರೆ.
ನಮ್ಮ ಈ ಎಲ್ಲಾ ಪ್ರಯತ್ನಕ್ಕೆ ಪೋಷಕರೂ ಕೂಡ ಸಹಕಾರ ನೀಡುತ್ತಿದ್ದಾರೆ.ಗಿಡ ನೆಡುವ ಕಾರ್ಯಕ್ರಮ ಮಕ್ಕಳಿಗೆ ಎಷ್ಟು ಖುಷಿ ನೀಡುತ್ತದೆ ಎಂದರೆ ತಮ್ಮ ತಮ್ಮ ಹುಟ್ಟಿದಹಬ್ಬಕ್ಕೆ ಶಾಲೆಗೆ ಗಿಡ ನೀಡುವಾಗ ಪುಟಾಣಿಗಳ ಮುಖದಲ್ಲಿಅರಳುವ ನಗು ಸಂಜೆ ಶಾಲೆ ಬಿಡುವವರೆಗೂ ನಳನಳಿಸುತ್ತಲೇ ಇರುತ್ತದೆ.
Sent from my Huawei Mobile
ಮತ್ತೆ ಎಂದಿನಂತೆ ಪರಿಸರ ದಿನಾಚರಣೆ ಬಾಗಿಲಿಗೆ ಬಂದಿದೆ. ಪ್ರತೀ ವರ್ಷವೂ ಬರುತ್ತದೆ ,ನಾವುಗಳು ಪ್ರತಿವರ್ಷವೂ ಅದೇ ಅದೇ ಹಳತಾದ ಭಾಷಣಗಳು,ಅದೇ ಗಿಡನೆಡುವ ಕಾರ್ಯಕ್ರಮ ಮಾಡಿ ಅದನ್ನು ಕಳುಹಿಸಿ ಕೊಟ್ಟು,ಎಂದಿನಂತೆ ನಮ್ಮ ನಮ್ಮ ಅರಿವಿನ ಬಾಗಿಲು ಮುಚ್ಚಿಕೊಂಡು ,ನಮ್ಮ ದುರಾಸೆಯ ,ವಿಪರೀತ ವಸ್ತು ವ್ಯಾಮೋಹದ ಜೀವನ ಶೈಲಿಗೆ ಮರಳಿ ಹೋಗುತ್ತೇವೆ.
ಆದರೆ ಈ ಬಾರಿ ಪರಿಸರ ದಿನ ತಾನೊಂದೇ ಬಂದಿಲ್ಲ ಜೊತೆಯಲ್ಲಿ ಕರೋನ ಮಹಾಮಾರಿಯ ಕರೆತಂದಿದೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮ ಈ ಪರಿಸರವನ್ನ ಉಳಿಸುವೆಡೆಗೆ ದೃಢ ಸಂಕಲ್ಪ ಕೈಗೊಂಡು ಕಾರ್ಯ ಪ್ರವೃತ್ತರಾಗದೆ ಹೋದರೆ ನಮ್ಮೆಲ್ಲರ ವಿನಾಶ ಕಟ್ಟಿಟ್ಟ ಬುತ್ತಿ.
ಪರಿಸರದಲ್ಲಿ ಪ್ರತಿಯೊಂದೂ ಇನ್ನೊಂದರೊಂದಿಗೆ ಲಗತ್ತಿಸಿಕೊಂಡಿದೆ ಅಂತ ವಿಜ್ಞಾನ ಹೇಳುತ್ತದೆ.ಪರಿಸರದಲ್ಲಿ ಮಾನವನಿಗೆ ಎಷ್ಟು ಮಹತ್ವವಿದೆಯೋ ಒಂದು ಚಿಕ್ಕ ಇರುವೆಗೂ ಅಷ್ಟೇ ಮಹತ್ವವಿದೆ,ಜಗತ್ತಿನ ಅತ್ಯಂತ ಬೃಹತ್ ಜೀವಿಯಾದ ನೀಲಿ ತಿಮಿಂಗಿಲ ಎಷ್ಟು ಬೆರಗು ಹುಟ್ಟಿಸುವುದೋ ಅದಕ್ಕಿಂತ ಹೆಚ್ಚಿನ ಬೆರಗು , ದಿಗಿಲನ್ನು ಕಣ್ಣಿಗೇ ಕಾಣದ ಅತ್ಯಂತ ಸೂಕ್ಷ್ಮ ಜೀವಿಯಾದ ಕರೋನ ಎಂಬ ಒಂದು ವೈರಸ್ ಹುಟ್ಟಿಸಿ ಬಿಟ್ಟಿದೆ.
ಆದರೆ ಪರಿಸರದ ಸೂಕ್ಷ್ಮ ಪರಸ್ಪರ ಕೊಂಡಿಗಳನ್ನ ಅರಿಯದ ಮಾನವ ತನ್ನ ದುರಾಸೆಯಿಂದಾಗಿ,ತನಗೊಬ್ಬನಿಗೆ ಈ ಭೂಮಿ,ಅದರ ಎಲ್ಲ ಸಂಪನ್ಮೂಲ ಅನ್ನುವ ಅಹಂಕಾರದಿಂದ ವಿಪರೀತವಾಗಿ ಬಳಕೆ ಮಾಡುತ್ತಾ,ಅದರಿಂದ ತನ್ನ ಗೋರಿ ತಾನೇ ತೋಡಿ ಕೊಳ್ಳುತ್ತಾ ಸಾಗಿದ್ದಾನೆ.
ವಿಪರೀತ ಕೈಗಾರಿಕೀಕರಣ,ಅರಣ್ಯನಾಶ,ಅಭಿವೃದ್ದಿ
ಹೋಗುತ್ತಿವೆ.
ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಂಡು ಪರಿಸರದ ಸೂಕ್ಷ್ಮ ಜೀವಜಾಲ ಸಮತೋಲನವನ್ನು ಕಾಪಾಡಿಕೊಂಡು ಹೋಗದಿದ್ದರೆ ,ನಮ್ಮ ಸುಂದರ ನೀಲಿಗೋಲವಾದ ಭೂಗ್ರಹ ಸೌರ ಮಂಡಲದ ಇತರೆ ಬರಡು ಗ್ರಹಗಳ ಸಾಲಿಗೆ ಸೇರುವ ದಿನ ದೂರವಿಲ್ಲ.
ಹಾಗಾಗಿ ನಮ್ಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತ ರಾಗ ಬೇಕಾಗಿರುವುದು ನಮ್ಮ ಅತ್ಯಂತ ಆದ್ಯಕರ್ತವ್ಯವಾಗಿದೆ.
ಪರಿಸರ ಸಂರಕ್ಷಣೆ ಕಾರ್ಯ ದಲ್ಲಿ ತೊಡಗಿಸಿಕೊಳ್ಳಲು
"ಸಾವಿರ ಮೈಲುಗಳ ಪ್ರಯಾಣ ವಾದರೂ ಒಂದು ಹೆಜ್ಜೆಯಿಂದ ಪ್ರಾರಂಭ ವಾಗಬೇಕು"ಅನ್ನುವ ಮಾತಿನಂತೆ ನಾವೆಲ್ಲರೂ ನಮ್ಮಿಂದ ಆಗುವ ಚಿಕ್ಕ ಚಿಕ್ಕ ಪ್ರಯತ್ನಗಳನ್ನ ಯಾಕೆ ಮಾಡಬಾರದು?
ಒಮ್ಮೆ ನಾನು ಕೆಲಸ ಮಾಡುವ ಶಾಲೆಯಿರುವ ಗ್ರಾಮದ ಪಂಚಾಯತ್ ನ ಅಭಿವೃದ್ದಿ ಅಧಿಕಾರಿ ಅಂದರೆ ಪಿ ಡಿ ಒ
ಶಾಲೆಗೆ ಬಂದು ಮಾತನಾಡುತ್ತಿರುವಾಗ,ಗ್ರಾಮದ ವಿದ್ಯುತ್ ಬಿಲ್ ಅಧಿಕ ಪ್ರಮಾಣ ದಲ್ಲಿ ಬಂದಿರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾ,ನಮ್ಮೆಲ್ಲ ರೊಂದಿಗೆ ಮಾತನಾಡುತ್ತ "ನೋಡಿ ಮೇಡಂ,ಹಳ್ಳಿಯಲ್ಲಿ ಎಲ್ಲರೂ ಸಮಯಕ್ಕೆ ಸರಿಯಾಗಿ ಬೀದಿ ದೀಪಗಳನ್ನು ಹಾಕುವುದು,ಆರಿಸುವುದು ಮಾಡಬಹುದಿತ್ತು,ಕೆಲವು ಸಾರಿ ಸಂಜೆ ಐದು ಘಂಟೆಗೆ ಹಾಕಿ ಬೆಳಿಗ್ಗೆ ಎಂಟು ಗಂಟೆಯಾದರೂ ಕೆಲವು ಬೀದಿಗಳಲ್ಲಿ ದೀಪ ಉರಿಯುತ್ತಿರುವದನ್ನು ನೋಡಿದ್ದೇನೆ.ಎಷ್ಟೋ ಸಾರ್ವಜನಿಕ ನಲ್ಲಿಗಳಲ್ಲಿ ನೀರು ಹರಿದು ಹೋಗುತ್ತಿರುತ್ತದೆ,ಕಸ ಸಂಗ್ರಹಣೆ ಯ ವ್ಯಾನ್ ಬರುವ ತನಕ ಕಾಯುವ ವ್ಯವಧಾನವೂ ಕೆಲವರಿಗೆ ಇರುವುದಿಲ್ಲ,ಖಾಲಿ ಸೈಟ್ ಕಂಡರೆ ಸಾಕು ಕಸ ಎಸೆದು ಹೋಗುತ್ತಿರುತ್ತಾರೆ.ತಮ್ಮ ಅಕ್ಕ ಪಕ್ಕ ಚೆನ್ನಾಗಿ ಇಟ್ಟು ಕೊಳ್ಳುವ ನಾಗರಿಕ ಪ್ರಜ್ಞೆ ಬೇಡವೇ?ಇದೆಲ್ಲದಕ್ಕೆ ನಮ್ಮ ಪಂಚಾಯತ್ ಹಣವನ್ನು ಕಟ್ಟಬೇಕು.ಇಷ್ಟು ಸಣ್ಣ ಸಣ್ಣ ವಿಷಯಗಳ ಕಡೆಗೆ ನಮ್ಮ ಜನ ಗಮನ ಹರಿಸಿದರೆ ಸಾಕು,ಉಳಿತಾಯವಾಗುವ ಹಣವನ್ನು ಊರಿನ ಅಭಿವೃದ್ಧಿಗೆ ಬಳಸ ಬಹುದಲ್ಲವೆ"ಎಂದು ಹೇಳಿದರು.
ಹೌದಲ್ಲವೇ ಒಂದು ಚಿಕ್ಕ ಗ್ರಾಮಕ್ಕೆ ಅನ್ವಯಿಸುವುದು ಇಡೀ ಪ್ರಪಂಚಕ್ಕೆ ಅನ್ವಯಿಸುವುದಿಲ್ಲವೇ.ನಾವು ಕಸ ಹಾಕುತ್ತೇವೆ ನೀವು ಶುಚಿ ಮಾಡಿ ಅಂತ ಎಲ್ಲಾ ವಿಷಯಕ್ಕೂ ಸರ್ಕಾರವನ್ನು ದೂರುವುದು ಸರಿಯೇ?ನಾಗರಿಕರಾಗಿ ನಮ್ಮ ಕರ್ತವ್ಯಗಳೂ ಕೂಡ ಕೆಲವು ಇಲ್ಲವೇ?
ಪ್ರತಿನಿತ್ಯ ಸಂಜೆಯ ವಾಕ್ ಮಾಡುವಾಗ ರಸ್ತೆ ಬದಿಯಲ್ಲಿ ಎಸೆದಿರುವ ಕಸ ನೋಡಿದಾಗ ತಮ್ಮ ಕಸವನ್ನು ತಾವೇ ಸರಿಯಾಗಿ ನಿರ್ವಹಣೆ ಮಾಡಲಾಗದ ಜನರ ಬಗ್ಗೆ ಅಪಾರ ಕೋಪ ಬರುತ್ತದೆ.ಮನೆಯಲ್ಲಿ ಕಸದ ನಿರ್ವಹಣೆ ಏನೂ ಅಂತಹ ರಾಕೆಟ್ ಸೈನ್ಸ್ ಅಲ್ಲ ಬಿಡಿ.ಚಿಕ್ಕ ಚಿಕ್ಕ ವಿಷಯಗಳ ಕಡೆಗೆ ಗಮನ ನೀಡಿದರೆ ಸಾಕು ಪ್ರತಿ ಮನೆಯು ಶೂನ್ಯ ಕಸ ಉತ್ಪಾದಿಸುವ ಮನೆಯಾಗಬಹುದು.ಅಂಗಡಿಯಿಂದ ಯಾವುದೇ ಸಾಮಗ್ರಿ,ಹಣ್ಣು ತರಕಾರಿ ತರುವಾಗ ಒಂದು ಬಟ್ಟೆಯ ಕೈಚೀಲ ತೆಗೆದು ಕೊಂಡು ಹೋದರಾಗದೆ?ಮನೆಯಲ್ಲೇ ಹಳೇ ನ್ಯೂಸ್ ಪೇಪರ್ ಬಳಸಿ ಚಿಕ್ಕ ಚಿಕ್ಕ ಪೇಪರ್ ಬ್ಯಾಗ್ ತಯಾರಿಸಿ ಕೊಂಡು ಅಂಗಡಿ ಸಾಮಗ್ರಿಗಳನ್ನ ತಂದರೆ ಅನಗತ್ಯವಾಗಿ ಪ್ಲಾಸ್ಟಿಕ್ ಕವರ್ ಗಳನ್ನೂ ಬಳಸುವುದು ತಪ್ಪುತ್ತದೆ..ಮನೆಯಲ್ಲೇ ತಾರಸಿಯಲ್ಲಿ,ಬಾಲ್ಕನಿಯಲ್ಲಿ ಇಲ್ಲವೇ ಹೊರಗಡೆ ಅಂಗಳದಲ್ಲೇ ಒಂದು ನಾಲ್ಕಾರು ಗಿಡಗಳ ಕುಂಡಗಳನ್ನಿಟ್ಟು ಕೊಂಡರೆ ಮನೆಯ ತರಕಾರಿಗಳ ಹಣ್ಣಿನ ಸಿಪ್ಪೆಯನ್ನು ಗೊಬ್ಬರವಾಗಿ ಬಳಸಬಹುದು. ಕೈತೋಟವಿದ್ದರೆ ಇನ್ನೂ ಚೆನ್ನ. ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಬಳಸಬಹುದು. ಊಟಾ ಮಾಡುವಾಗ ಸ್ವಲ್ಪವೂ ತಟ್ಟೆಯಲ್ಲಿ ಬಿಡದಂತೆ ತಿನ್ನುವ ಅಭ್ಯಾಸ ನಾವೂ ಮಾಡಿಕೊಂಡು ನಮ್ಮ ಮಕ್ಕಳಿಗೂ ಮಾಡಿಸಿದರೆ ಅದರಿಂದ ಎಷ್ಟೋ ಕಸದ ಉತ್ಪತ್ತಿ ಆಗುವುದು ನಿಲ್ಲುವುದಿಲ್ಲವೇ.
ಇನ್ನ ಮರು ಬಳಕೆಗೆ, ಮರು ಚಕ್ರೀಕರಣಕ್ಕೆ ಒಳಪಡಬಲ್ಲ ವಸ್ತುಗಳನ್ನು ಬಳಸಿ ಹಲವು ಉಪಯುಕ್ತ ವಸ್ತುಗಳನ್ನು ತಯಾರಿಸಲು ಈಗ ಎಷ್ಟೊಂದು ಅವಕಾಶ,ಮಾರ್ಗದರ್ಶನ ಲಭ್ಯವಿದೆ.ಅಂತರ್ಜಾಲ ಹುಡುಕಿದರೆ ಸಾಕು ಎಷ್ಟೊಂದು ಮಾಹಿತಿ ಈ ತ್ಯಾಜ್ಯ ವಸ್ತುಗಳ ಮರುಬಳಕೆ ಬಗ್ಗೆ ಸಿಗುತ್ತದಲ್ಲವೆ.
ಮನೆಯ ಒಳಾಂಗಣ ಅಲಂಕಾರಕ್ಕೆ ಲಕ್ಷಗಟ್ಟಲೆ ವ್ಯಯ ಮಾಡುವ ಜನ , ಆ ವೆಚ್ಚದ ಸ್ವಲ್ಪ ಭಾಗವನ್ನದರೂ ಮಳೆನೀರು ಕುಯಿಲಿಗೆ,ಸೌರ ವಿದ್ಯುತ್ ವ್ಯವಸ್ಥೆಗೆ ಬಳಸಿದರೆ ಎಷ್ಟು ಚೆನ್ನ.
ಕೆಲವರಿಗಂತೂ ವಾಹನಗಳಿಲ್ಲದೆ ಒಂದು ನಾಲ್ಕು ಹೆಜ್ಜೆಯೂ ನಡೆಯಲಾಗದು.ನಡೆದು ಹೋಗಿಯೇ ತಲುಪಬಲ್ಲ ಜಾಗಗಳಿಗೂ ಬೈಕ್,ಕಾರ್ ತೆಗೆಯುವವರು ತಮ್ಮ ಈ ದುರಭ್ಯಾಸ ಎಂದು ಬಿಡುವರೋ.ಚಿಕ್ಕ ಚಿಕ್ಕ ದೂರಗಳಿಗೆ ಕಾಲ್ನಡಿಗೆ ಇಲ್ಲವೇ ಬೈಸಿಕಲ್ ಬಳಸಿದರೆ ಹಣವೂ ಉಳಿದು,ಆರೋಗ್ಯವೂ ಹೆಚ್ಚುತ್ತದೆ.
ಮನೆಯ ಬಳಿಯ ಬೀದಿದೀಪಗಳನ್ನು ಅನಾವಶ್ಯಕವಾಗಿ ಉರಿಸುವುದನ್ನು ತಪ್ಪಿಸುವುದು,ನಮ್ಮ ನಮ್ಮ ಮನೆಗಳಲ್ಲೇ ವಿದ್ಯುತ್ ಮತ್ತು ನೀರಿನ ಮಿತಬಳಕೆ,ನಮ್ಮ ಮನೆಯ ಕಸದ ಸೂಕ್ತ ವಿಲೇವಾರಿ ನಾವೇ ಮಾಡಿಕೊಳ್ಳುವುದು ಇದೆಲ್ಲ ಅತ್ಯಂತ ಚಿಕ್ಕ ಚಿಕ್ಕ ವಿಷಯಗಳಾದರೂ ,ಸಮುದಾಯದ ಪ್ರತಿಯೊಬ್ಬರೂ ಮಾಡಿದರೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅವುಗಳು ದೊಡ್ಡ ಕೊಡುಗೆಯನ್ನೇ ನೀಡಬಲ್ಲವು.
ಮಕ್ಕಳಿಗೆ ಎಳವೆಯಿಂದಲೆ ಪರಿಸರ ಪ್ರಜ್ಞೆ ಖಂಡಿತವಾಗಿ ಬೆಳೆಸ ಬೇಕಾಗಿರುವುದು ಎಲ್ಲಾ ಹೆತ್ತವರ ಮತ್ತು ಶಿಕ್ಷಕರ ಕರ್ತವ್ಯ.
ನಾನು ಕೆಲಸ ಮಾಡುವ ಶಾಲೆಯಲ್ಲಿ ಯಾವುದೇ ಮಗುವಿನ ಇಲ್ಲವೇ ಶಿಕ್ಷಕರ ಜನ್ಮ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಗುತ್ತಿದೆ .ಮಕ್ಕಳು ಅವರ ಜನ್ಮದಿನದಂದು ಚಾಕೋಲೇಟ್ ಹಂಚುವ ವಾಡಿಕೆ ಇತ್ತು.ಆದರೆ ಮಕ್ಕಳು ಚಾಕೋಲೇಟ್ ತಿಂದ ಬಳಿಕ ಅದರ ಪ್ಲಾಸ್ಟಿಕ್ ಕವರ್ ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು.ದೊಡ್ಡ ಗಾತ್ರದ ಪ್ಲಾಸ್ಟಿಕ್ ಕಸ ಮರು ಬಳಕೆ ಮಾಡುವುದು ಸಾಧ್ಯ ಆದರೆ ಲೆಕ್ಕಕ್ಕೆ ಸಿಗದ ಈ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ತುಣುಕುಗಳು ಸುಲಭವಾಗಿ ಮಣ್ಣು ಸೇರಿ ಹೆಚ್ಚಿನ ಪ್ರಮಾಣದ ಹಾನಿ ಉಂಟು ಮಾಡುತ್ತವೆ.ಆದ್ದರಿಂದ ಮಕ್ಕಳಲ್ಲಿ ಪರಿಸರ ಜಾಗೃತಿಯ ಅರಿವನ್ನು ಮೂಡಿಸುವ ಸಲುವಾಗಿ ನಮ್ಮ ಶಾಲೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಶಾಲೆಯನ್ನಾಗಿ ಮಾಡುವ ಗುರಿ ಸಾಧನೆಗಾಗಿ ಮಕ್ಕಳು ತಮ್ಮ ಹುಟ್ಟು ಹಬ್ಬದ ದಿನ ಶಾಲೆಯಲ್ಲಿ ಚಾಕಲೇಟ್ ಹಂಚುವ ಬದಲು ಒಂದು ಗಿಡ ನೀಡುವಂತೆ ಮಕ್ಕಳಿಗೆ ತಿಳಿಸಿದಾಗ ಅವರಿಂದ ಅತ್ಯಂತ ಉತ್ಸಾಹದ ಪ್ರತಿಕ್ರಿಯೆ ಬಂದಿತು. ಮಕ್ಕಳು ಗಿಡ ತಂದು ಅವರೇ ನೆಟ್ಟು ,ವರ್ಷವಿಡೀ ಅದನ್ನು ನೋಡಿ ಕೊಳ್ಳುವಂತೆ ಪ್ರೋತ್ಸಾಹಿಸುವ ಈ ಕಾರ್ಯಕ್ರಮ ಮಕ್ಕಳಿಗೆ ಬಹಳ ಮುದ ನೀಡಿದೆ.
ಮರು ಚಕ್ರಿಕರಣ ದ ಬಗೆಗೂ ಶಾಲೆಯಲ್ಲಿ ಮಾಹಿತಿ ನೀಡಲಾಗುತ್ತಿದೆ. ಬಳಸಿ ಎಸೆದ ಪ್ಲಾಸ್ಟಿಕ್ ನೀರಿನ ಬಾಟಲ್ ಗಳು ನಮ್ಮ ಮಕ್ಕಳ ಕೈಯಲ್ಲಿ ಹೂ ಬೆಳೆಸುವ ಕುಂಡಗಳಾಗಿವೆ.ಅಕ್ಷರ ದಾಸೋಹ ಅಡಿಗೆ ಮನೆಯ ಅಕ್ಕಿ ಬೇಳೆ ತೊಳೆದ ನೀರು ಈ ಹೂ ಕುಂಡಗಳ ಗಿಡಗಳ ಪಾಲು.ಅಡಿಗೆ ಮನೆಯ ತರಕಾರಿ ಸಿಪ್ಪೆಗಳನ್ನು ಗೊಬ್ಬರದ ಗುಂಡಿಗೆ ಹಾಕುತ್ತಿದ್ದಾರೆ..ಶಾಲೆಯಲ್ಲಿ ಪೇಪರ್ ಹರಿಯುವುದೂ ನಿಷಿದ್ಧ.ಒಂದು ಹಾಳೆ ಹರಿದು ವ್ಯರ್ಥಮಾಡಿದರೆ ಅದು ಮರವೊಂದರ ರೆಂಬೆ ಮುರಿದಂತೆ ಎಂದು ಮಕ್ಕಳ್ಳಲ್ಲಿ ಹೇಳಿದ್ದರಿಂದ ಈಗ ಶಾಲೆಯಲ್ಲಿ ಬೀಳುವ ಕಸದ ಪ್ರಮಾಣ ಇಲ್ಲವೆಯಿಲ್ಲ ಎಂಬಷ್ಟು ಕಡಿಮೆಯಾಗಿದೆ.ಮಕ್ಕಳಲ್ಲಿ ಎಳವೆ ಯಿಂದಲೆ ಪರಿಸರ ಜಾಗೃತಿ ಮೂಡಿಸುವುದು ಇಂದಿನ ತುರ್ತು..ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಎಲ್ಲ ಶಿಕ್ಷಕರು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದಾರೆ.
ನಮ್ಮ ಈ ಎಲ್ಲಾ ಪ್ರಯತ್ನಕ್ಕೆ ಪೋಷಕರೂ ಕೂಡ ಸಹಕಾರ ನೀಡುತ್ತಿದ್ದಾರೆ.ಗಿಡ ನೆಡುವ ಕಾರ್ಯಕ್ರಮ ಮಕ್ಕಳಿಗೆ ಎಷ್ಟು ಖುಷಿ ನೀಡುತ್ತದೆ ಎಂದರೆ ತಮ್ಮ ತಮ್ಮ ಹುಟ್ಟಿದಹಬ್ಬಕ್ಕೆ ಶಾಲೆಗೆ ಗಿಡ ನೀಡುವಾಗ ಪುಟಾಣಿಗಳ ಮುಖದಲ್ಲಿಅರಳುವ ನಗು ಸಂಜೆ ಶಾಲೆ ಬಿಡುವವರೆಗೂ ನಳನಳಿಸುತ್ತಲೇ ಇರುತ್ತದೆ.
Sent from my Huawei Mobile
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ